ಚಿಕ್ಕಬಳ್ಳಾಪುರ prajakiran.com : ಕೊಲೆ ಆರೋಪಿಗಳ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮದ್ದಲಕಾನ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದರಿಂದಾಗಿ ಗ್ರಾಮದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಿನ್ನೇ ಹರೀಶ್ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಇಂದು ಗ್ರಾಮಕ್ಕೆ ಹರೀಶನ ಪ್ರಾರ್ಥಿವ ಶರೀರ ಕರೆ ತರಲಾಗಿತ್ತು.
ಹರೀಶ್ ನ ಶವ ಕಂಡು ಕುಪಿತಗೊಂಡ ಆತನ ಸಂಬಂಧಿಕರು ಹಾಗೂ ಕೆಲ ಯುವಕರು ಕೊಲೆ ಆರೋಪಿ ವೆಂಕಟೇಶ್ ಹಾಗೂ ಇತರೆ ಆರೋಪಿಗಳ ಮನೆಗೆ ಕಲ್ಲು ತೂರಿದರು.
ಇದಾದ ಕೆಲವೇ ಕ್ಷಣಗಳಲ್ಲಿ ಪೆಟ್ರೋಲ್ ಸುರಿದ ಬೆಂಕಿ ಹಚ್ಚಿದರು. ಇದರಿಂದಾಗಿ ಘಟನೆಯಲ್ಲಿ ಹರೀಶನ ಸಂಬಂಧಿ ಯುವಕನೊಬ್ಬನಿಗೆ ಗಾಯವಾಗಿದೆ.
ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.