50 ಲಕ್ಷಕ್ಕೂ ಅಧಿಕ ಮೌಲ್ಯದ ಕಟಗಿಗಳು ಸುಟ್ಟು ಕರಕಲು…!
ಧಾರವಾಡ ಪ್ರಜಾಕಿರಣ.ಕಾಮ್ :
ಇಲ್ಲಿನ ಮಣಕಿಲ್ಲಾದಲ್ಲಿರುವ ಕೃಷ್ಣ ಬೆಳಗಲಿ ಅವರ ಮಾಲಿಕತ್ವದ
ಗೌತಮ್ ಮಿಲ್ ನಲ್ಲಿ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ
50 ಲಕ್ಷಕ್ಕೂ ಅಧಿಕ ಮೌಲ್ಯದ ಸಾಗವಾನಿ ಸೇರಿದಂತೆ ವಿವಿಧ ಮರದ ಕಟಗಿಗಳು ಸುಟ್ಟು ಕರಕಲಾಗಿವೆ.
ಸುಮಾರು 9 ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸಲು ಹಲವು ಗಂಟೆಗಳ ಕಾಲ ಹರಸಾಹಸ ನಡೆಸಿದರು.
ಸ್ಥಳೀಯರು, ಪೊಲೀಸರ ಸಹಾಯದಿಂದ ಮತ್ತು ಹತ್ತು ಹಲವು ಅಗ್ನಿಶಾಮಕ ದಳದ ಸಿಬ್ಬಂದಿಯ ಪರಿಶ್ರಮದಿಂದ ಕೊನೆಗೂ ಬೆಂಕಿ ಸಂಪೂರ್ಣ ಹತೋಟಿಗೆ ಬಂದಿದೆ.
ಆಕಸ್ಮಿಕ ಬೆಂಕಿ ಅವರಿಸಲು ಈವರೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಎಂದು ಹೇಳಲಾಗಿದೆ.
ಈ ಕುರಿತು ಧಾರವಾಡದ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು ಪೊಲೀಸರು ಮುಂದಿನಕ್ರಮ ಜರುಗಿಸಿದ್ದಾರೆ.