ರಾಜ್ಯ

ಧಾರವಾಡದಲ್ಲಿ ನಾಮಕಾವಾಸ್ತೆ ಸೀಲ್ ಡೌನ್ ….!





ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಕರೋನಾ ಅಟ್ಟಹಾಸ ಮುಂದುವರೆದ ಬೆನ್ನಹಿಂದೆಯೇ ಜಿಲ್ಲಾಡಳಿತದಿಂದ ನಾಮಕಾವಾಸ್ತೆ ಸೀಲ್ ಡೌನ್ ನಡೆಯುತ್ತಿದೆಯೇ ಎಂಬ ಪ್ರಶ್ನೆ ಕಾಡತೊಡಗಿದೆ.

ಹೌದು ಇದು ಅಚ್ಚರಿಯಾದ್ರೂ ನಂಬಲೇ ಬೇಕಾದ ಸತ್ಯ ಸಂಗತಿ. ಸೀಲ್ ಡೌನ್ ಮಾಡಲು ಜಿಲ್ಲಾಡಳಿತ ತಗಡು, ಪೊಲೀಸ್ ಬ್ಯಾರಿಕೇಡ್ ಸೇರಿದಂತೆ ಹಲವು ನಿರ್ದಿಷ್ಟ ವಸ್ತುಗಳನ್ನು ಬಳಕೆ ಮಾಡಲು ಸೂಚಿಸಿದೆ.

ಆದರೆ ಧಾರವಾಡದ ಸಂಪಿಗೆ ನಗರದ  ಕರೋನಾ ಸೋಂಕಿತರ ಮನೆಗೆ ಧಾರವಾಡ ಜಿಲ್ಲಾಡಳಿತ ತಗಡಿನಿಂದ ಸೀಲ್ ಡೌನ್ ಮಾಡುವ ಬದಲಿಗೆ ಗಿಡದ ರಂಬೆ, ಕೊಂಬೆಗಳನ್ನು ಹಾಕಿ ಕೈ ತೊಳೆದುಕೊಳ್ಳಲಾಗಿದೆ.



ಇದು ಬಡಾವಣೆಯ ಜನತೆಗೆ ಹಾಗೂ ಕರೋನಾ ಸೋಂಕಿತ ಕುಟುಂಬಕ್ಕೆ ಪೀಕಲಾಟ ತಂದಿಟ್ಟಿದೆ. ಮನೆಯನ್ನು ಈ ರೀತಿ ಸೆಲ್ ಡೌನ್ ಮಾಡಿದ್ದು ಯಾಕೆ, ಹೀಗೆ ಮಾಡುವ ಅಗತ್ಯವಾದ್ರೂ ಇದೆ.

ಇದು ವಿಪರ್ಯಾಸದ ಸಂಗತಿ ಎಂದು ಕೆಲವರು ಪ್ರಜಾಕಿರಣ.ಕಾಮ್ ಗೆ ತಮ್ಮ ನೋವು ತೋಡಿಕೊಂಡಿದ್ದಾರೆ.



ಇನ್ನೂ ಕೆಲವು ಕಡೆ ತಗಡು ಹಾಕಿದ್ದರೂ ಅದನ್ನು ಹಾರಿ ಹೋರ ಹೋಗಿ ಬರುವ ಪ್ರಕರಣ ಎನ್ ಟಿ ಟಿ ಎಫ್ ಬಳಿಯಿರುವ ರಾಮನಗರದಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಸ್ಥಳೀಯರು ಪ್ರಜಾಕಿರಣ.ಕಾಮ್ ಗೆ ಮಾಹಿತಿ ನೀಡಿದ್ದಾರೆ.

ದಿನನಿತ್ಯ ವಿದ್ಯಾನಗರಿ ಧಾರವಾಡದಲ್ಲಿ ನೂರಾರು ಪ್ರಕರಣಗಳು ದಾಖಲಾಗುತ್ತಿದ್ದರೂ, ಜಿಲ್ಲೆಯ ಜನಪ್ರತಿನಿಧೀಗಳು ಎಚ್ಚೆತ್ತುಕೊಳ್ಳದಿರುವುದು ಬೇಸರದ ಸಂಗತಿಯಾಗಿದೆ.

ಈಗಾಗಲಾದರೂ  ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ದಿಟ್ಟ ಹೆಜ್ಜೆ ಇರಿಸುತ್ತಾ ಎಂಬುದು ಕಾದು ನೋಡಬೇಕಿದೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *