ರಾಜ್ಯ

ಬೆಂಗಳೂರಿನಲ್ಲಿ ಸೋಂಕಿತರಿಗೆ ಬೆಡ್ ಗಳೇ ಸಿಗ್ತಿಲ್ಲ…. ಮುಂದುವರೆದ ರೋಗಿಗಳ ಪರದಾಟ…!

ಬೆಂಗಳೂರು prajakiran.com : ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಲೇ ಇದೆ. ಬಹುತೇಕ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಹಾಗೂ ಕೋವಿಡ್ ಯೇತರ ರೋಗಿಗಳಿಗೆ ಬೆಡ್ ಗಳೇ ಸಿಗುತ್ತಿಲ್ಲ. ತಮ್ಮ ತಂದೆ-ತಾಯಿಯನ್ನು ಉಳಿಸಿಕೊಳ್ಳಲು ಮಕ್ಕಳು ಪರದಾಡುತ್ತಿದ್ದರೆ, ಮಕ್ಕಳನ್ನು, ಸಂಬಂಧಿಕರನ್ನು ಉಳಿಸಿಕೊಳ್ಳಲು ಪೋಷಕರು ಹಾಗೂ ಕುಟುಂಬಸ್ಥರು ಅಲೆದಾಡಿ ಅಲೆದಾಡಿ ಬೇಸತ್ತು ಹೋಗುತ್ತಿದ್ದಾರೆ. ಶನಿವಾರ ಬೆಳಗ್ಗೆಯಿಂದ ಅಮ್ಮನ ಉಳಿಸಿಕೊಳ್ಳಲು ಮಗನ ಪರದಾಟ ಒಂದೆಡೆಯಾದರೆ, ತಂದೆಯನ್ನು ಉಳಿಸಿಕೊಳ್ಳಲು ಇಬ್ಬರು ಪುತ್ರರ ಹೆಣಗಾಟ ಬೆಂಗಳೂರಿನಲ್ಲಿ ಕಂಡು ಬಂದಿದೆ. ಮೂರು ನಾಲ್ಕು ಆಸ್ಪತ್ರೆ ಅಲೆದಾಟ […]