ವಿಜಯಪುರ prajakiran.com : ಕೈಗೆ ಕ್ವಾರಂಟೈನ್ ಸೀಲ್ ಹೊಂದಿದ ವ್ಯಕ್ತಿಯ ಓಡಾಟದಿಂದ ಕೆಲ ಕಾಲ ವಿಜಯಪುರ ನಗರದಲ್ಲಿ ಜನತೆ ಭಯಭೀತರಾಗಿದ್ದ ಘಟನೆ ಬುಧವಾರ ನಡೆದಿದೆ.
ವಿಜಯಪುರ ನಗರದ ಸ್ಟೇಷನ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ನಗರದ ಬಡಿಕಮಾನ ರಸ್ತೆಯಲ್ಲಿನ ಮಿನಿ ಬಸ್ ನಿಲ್ದಾಣದಲ್ಲಿ ವ್ಯಕ್ತಿ ಕಾಣಿಸಿಕೊಂಡಿದ್ದ.
ಇದರಿಂದಾಗಿ ಕ್ವಾರಂಟೈನ್ ನಿಂದ ತಪ್ಪಿಸಿಕೊಂಡು ಬಂದಿರುವ ಶಂಕೆ ವ್ಯಕ್ತಪಡಿಸಿ ಜನತೆ ಕಳವಳ ವ್ಯಕ್ತಪಡಿಸಿದರು.
ಇತ ಹೋಂ ಕ್ವಾರಂಟೈನ್ ನಲ್ಲಿದ್ದನೋ ಅಥವಾ ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇದ್ದನೋ ಎಂಬುದು ಗೊತ್ತಾಗಿಲ್ಲ.
ಸೀಲ್ ಹೊಂದಿದ ವ್ಯಕ್ತಿಯ ಓಡಾಟದಿಂದ ಜನರಲ್ಲಿ ಆತಂಕ ಮನೆ ಮಾಡಿತ್ತು. ಕೂಡಲೆ ಆತನನ್ನು ಕ್ವಾರಂಟೈನ್ ಮಾಡಬೇಕು ಎಂದು ಆಗ್ರಹಿಸಿ ಆರೋಗ್ಯ ಇಲಾಖೆಗೆ ಜನತೆ ಮಾಹಿತಿ ರವಾನಿಸಿದರು.