ಧಾರವಾಡ prajakiran.com : ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಜಿಗಟ್ಟಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ 1 ಗಂಟೆ 14 ನಿಮಿಷಕ್ಕೆ ಬಾಲ್ಯ ವಿವಾಹ ನಡೆಸುತ್ತಿರುವುದಾಗಿ ಇ.ಆರ್.ಎಸ್.ಎಸ್-112 ನೇದ್ದಕ್ಕೆ ಕರೆ ಬಂದಿತ್ತು.
ಅದನ್ನು ಆಲಿಸಿದ ಪೊಲೀಸ್ ಕಂಟ್ರೋಲ್ ರೂಂ ಸಿಬ್ಬಂದಿ ತಕ್ಷಣ ಇ.ಆರ್.ಎಸ್.ಎಸ್-6 ವಾಹನದವರಿಗೆ ತಿಳಿಸಿದ ಕೇವಲ 15 ನಿಮಿಷಗಳಲ್ಲಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.
ಅಲ್ಲಿ ಈ ಕುರಿತು
ವಿಚಾರಿಸಿದಾಗ 15 ವರ್ಷದ ಬಾಲಕಿಗೆ ವಿವಾಹ ನಡೆಸುತ್ತಿರುವುದನ್ನು ಖಚಿತ ಪಡಿಸಿಕೂಂಡು ನಡೆಯುತ್ತಿದ್ದ ವಿವಾಹವನ್ನು ತಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ತಿಳಿಸಿದ್ದಾರೆ.
ಸದರಿ ಮಾಹಿತಿಯನ್ನು ತಕ್ಷಣ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಕಲಘಟಗಿ ಪೊಲೀಸ್ ಠಾಣೆಗೆ ನೀಡಿ ಮುಂದಿನ ಸೂಕ್ತ ಕ್ರಮ ಜರುಗಿಸಲು ಸೂಚಿಸಿದ್ದಾರೆ.
ಈ ರೀತಿ ಯಾವುದೇ ತುರ್ತು ಸೇವೆಗಾಗಿ ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಲು ಇ.ಆರ್.ಎಸ್.ಎಸ್ ಸಹಾಯವಾಣಿ – 112ಕ್ಕೆ ಸಾರ್ವಜನಿಕರು ಕರೆ ಮಾಡಿ ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಸಾರ್ವಜನಿಕರಲ್ಲಿ ಕೋರಿದ್ದಾರೆ.