ಬೆಳಗಾವಿ prajakiran.com : ಬೆಳಗಾವಿ-ಧಾರವಾಡ ನೂತನ ರೈಲು ಮಾರ್ಗವನ್ನ ಮಂಜೂರು ಮಾಡಿಸುವ ಮೂಲಕ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶಅಂಗಡಿ ಈ ಭಾಗದ ಜನರ ಬಹು ದಿನಗಳ ಬೇಡಿಕೆಗೆ ಸ್ಪಂದಿಸಿದ್ದಾರೆ.
ಅಂದಾಜು 1 ಸಾವಿರ ಕೋಟಿ ರೂಪಾಯಿಗಳ ಯೋಜನೆ ಇದಾಗಿದ್ದು, ಕೇಂದ್ರ ಸರ್ಕಾರ ಶೇ 50 ರಷ್ಟು ಹಾಗೂ ಶೇ 50 ರಷ್ಟು ಹಣವನ್ನ ರಾಜ್ಯ ಸರ್ಕಾರ ಭರಿಸಲಿದೆ.
ಬೆಳಗಾವಿ-ದೇಸೂರ-ಕರವಿನಕೊಪ್ಪ-ಹಿರೇಬಾಗೇವಾಡಿ-ಎಂ.ಕೆ.ಹುಬ್ಬಳ್ಳಿ-ಹೂಲಿಕಟ್ಟಿ-ಕಿತ್ತೂರ-ತೇಗೂರ-ಮಮ್ಮಿಗಟ್ಟಿ-ಕ್ಯಾರಕೊಪ್ಪ ಮೂಲಕ ಈ ರೈಲು ಧಾರವಾಡ ತಲುಪಲಿದೆ.
ಬೆಳಗಾವಿ-ಧಾರವಾಡ ಮಧ್ಯೆ 9 ರೈಲ್ವೆ ನಿಲ್ದಾಣಗಳು ಬರಲಿದ್ದು, ಕೇವಲ 1 ಗಂಟೆ ಅವಧಿಯ ಪ್ರಯಾಣ ಮಾರ್ಗ ಇದಾಗಲಿದೆ.
ಇದರಿಂದ ಬೆಳಗಾವಿ-ಧಾರವಾಡ ರೈಲ್ವೆ ಸಾರಿಗೆಯಲ್ಲಿ 3 ಗಂಟೆಗಳ ಪ್ರಯಾಣದ ಅವಧಿ ಉಳಿಯಲಿದ್ದು, ಈ ಯೋಜನೆಯಿಂದ ಕೈಗಾರಿಕೆ ಸೇರಿದಂತೆ ವಿವಿಧ ವಲಯಗಳ ಬೆಳವಣಿಗೆಗೆ ಅನುಕೂಲವಾಗಲಿದೆ.