ಬೆಂಗಳೂರು prajakiran.com : ರಾಜ್ಯದಲ್ಲಿ ಗುರುವಾರ ಕರೋನಾ ಪ್ರಕರಣಗಳು ಮತ್ತೇ ನೂರರ ಗಡಿ ದಾಟಿದ್ದು, ಒಂದೇ ದಿನ 115 ಪ್ರಕರಣಗಳು ಪತ್ತೆಯಾಗಿವೆ.
ಬೆಳಗ್ಗೆಯಷ್ಟೇ 75 ಪ್ರಕರಣಗಳು ಕಂಡು ಬಂದಿದ್ದವು. ಆದರೆ ಸಂಜೆ ವೇಳೆಗೆ ಮತ್ತೇ 40 ಜನರಿಗೆ ಸೋಂಕು ವಕ್ಕರಿಸಿದೆ.
ಮೈಸೂರಿನ ನಾಲ್ವರು ಪೊಲೀಸರಿಗೆ ಕ್ವಾರಂಟಿನ್ ಮಾಡಲಾಗಿದೆ. ಕ್ವಾರಂಟಿನ್ ಕೇಂದ್ರದಿಂದ ಮನೆಗೆ ಕಳುಹಿಸಿದ್ದ ವ್ಯಕ್ತಿಗೆ ಸೋಂಕು ಕಂಡು ಬಂದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಬೇಗೂರು ಗ್ರಾಮದಲ್ಲಿ ನಡೆದಿದೆ.
ಮುಂಬೈನಿಂದ ಬಂದ ನಾಲ್ವರಿಗೆ ಸೋಂಕು ತಗುಲಿದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಅದರಲ್ಲಿ ಎರಡು ವರ್ಷದ ಮಗು ಹಾಗೂ ತಾಯಿ ಸೇರಿ ನಾಲ್ವರಿದ್ದಾರೆ.
ಅದೇ ರೀತಿ ಬೆಳಗ್ಗೆ ಬೆಂಗಳೂರಿನಲ್ಲಿ 7, ಸಂಜೆಗೆ ಬೆಂಗಳೂರು ನಗರ ಜಿಲ್ಲೆಯಲ್ಲಿಮತ್ತೇರಡು ಸೇರಿ 9ಕ್ಕೆ ಏರಿದೆ. ಬೆಳಗ್ಗೆ ಕಲಬುರಗಿಯಲ್ಲಿ ಮೂರು ಪ್ರಕರಣ ಕಂಡು ಬಂದಿದ್ದರೆ ಸಂಜೆ ಮತ್ತೇರಡು ಸೇರಿ 5ಕ್ಕೆರಿದೆ.
ದಕ್ಷಿಣ ಕನ್ನಡದಲ್ಲಿ ಬೆಳಗ್ಗೆ 6 ಪ್ರಕರಣ ಕಂಡು ಬಂದಿದ್ದರೆ ಸಂಜೆ ವೇಳೆಗೆ ಮತ್ತೇ 18 ಪ್ರಕರಣ ಸೇರಿ ಒಂದೇ ದಿನ ಒಟ್ಟು 24 ಪ್ರಕರಣ ಬಂದಿವೆ.
ಇನ್ನೂ ಪಕ್ಕದ ಜಿಲ್ಲೆ ಉಡುಪಿಯಲ್ಲಿ ಬೆಳಗ್ಗೆ 27 ಪ್ರಕರಣ ಕಂಡುಬಂದಿದ್ದರೆ ಸಂಜೆ ಮತ್ತೇರಡು ಬರುವ ಮೂಲಕ ಒಟ್ಟು 29ಕ್ಕೆ ತಲುಪಿದೆ.
ಇನ್ನೂ ಬೀದರನಲ್ಲಿ ಬೆಳಗ್ಗೆ ಯಾವುದೇ ಪಾಸಿಟಿವ್ ಇರಲಿಲ್ಲ. ಆದರೆ ಸಂಜೆ ಬೀದರ ಜಿಲ್ಲೆಯಲ್ಲಿ 12 ಜನರಿಗೆ ಸೋಂಕು ಕಾಣಿಸಿಕೊಂಡಿದೆ.
ಹೀಗೆ ಒಂದೇ ದಿನ ಬೆಂಗಳೂರು 9, ಕಲಬುರಗಿ 5, ಯಾದಗಿರಿ 7, ಉಡುಪಿ 29, ಬೀದರ 12, ದಕ್ಷಿಣ ಕನ್ನಡ 24, ಹಾಸನ 13, ವಿಜಯಪುರ 2, ರಾಯಚೂರು1, ಚಿತ್ರದುರ್ಗ6, ಚಿಕ್ಕಮಗಳೂರು3 ಹೀಗೆ ಒಟ್ಟು 115 ಪ್ರಕರಣಗಳು ಕಂಡು ಬಂದಿವೆ.