ಧಾರವಾಡ prajakiran.com : ಹಾಡಹಗಲೇ ಮನೆ ಮುಂದೆ ನಿಲ್ಲಿಸಿದ್ದ ಇನ್ನೋವಾ ಕ್ರಿಸ್ಟಾ ಕಾರನ್ನು ಕಳವು ಮಾಡಿ ತಮ್ಮ ಕೈ ಚಳಕ ತೋರಿದ ಘಟನೆ ಧಾರವಾಡದಲ್ಲಿ ಶುಕ್ರವಾರ ನಡೆದಿದೆ. ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಕಾರ್ ಮಾಲೀಕರನ್ನು ಬೆಚ್ಚಿಬೀಳಿಸಿದೆ. ಧಾರವಾಡದ ಕೆಲಗೇರಿ ನಿವಾಸಿ ಪ್ರವೀಣ ಹುಯಿಲಗೋಳ ಅವರ ಹೆಸರಿನಲ್ಲಿ ನೋಂದಣಿಯಾಗಿರುವ ಈ ಕಾರ್ ಬಿಜೆಪಿ ಮುಖಂಡನಿಗೆ ಸೇರಿದ್ದು ಎಂದು ವಿದ್ಯಾಗಿರಿ ಪೊಲೀಸರು ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ. ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ […]
ಅಪರಾಧ
ಧಾರವಾಡದಲ್ಲಿ ಹೆಂಡತಿ ಜಗಳವಾಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಗಂಡ….!
ಧಾರವಾಡ prajakiran.com : ಹೆಂಡತಿ ಜಗಳವಾಡಿದ್ದಕ್ಕೆ ಮನನೊಂದು ಗಂಡನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ದಲ್ಲಿ ಶುಕ್ರವಾರ ನಡೆದಿದೆ. ಮಹಾಂತೇಶ ಈರಪ್ಪ ಹುರಕಡ್ಲಿ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವ. ಈತ ಮೂಲತಃ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದವನಾಗಿದ್ದು, ಧಾರವಾಡದ ಹೆಂಡತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ತಕ್ಷಣ ಇದನ್ನು ಗಮನಿಸಿದ ಕುಟುಂಬದ ಸದಸ್ಯರು ಆತನನ್ನು ಆಸ್ಪತ್ರೆಗೆ ಸೇರಿಸಿದರು. ಆದರೆ, ಆತ ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆ ಎಂದು ಧಾರವಾಡ ಶಹರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಶ್ರೀಧರ ಸತಾರೆ […]
ಧಾರವಾಡದಲ್ಲಿ ಇಸ್ಪೀಟ್ ಆಡುತ್ತಿದ್ದ ಎಂಟು ಜನರ ಬಂಧನ, ಬಿಡುಗಡೆ
ಧಾರವಾಡ prajakiran.com : ಇಸ್ಪೀಟ್ ಆಡುತ್ತಿದ್ದ ಎಂಟು ಜನರನ್ನು ಬಂಧಿಸಿ ಆನಂತರ ಬಿಡುಗಡೆಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ. ಬುಧವಾರ ಸಂಜೆ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಗಿರಿನಗರ ಬಡಾವಣೆಯ ಡಬಲ್ ರಸ್ತೆ ಪಕ್ಕದಲ್ಲಿ ಜೂಜಾಟದಲ್ಲಿ ನಿರತರಾಗಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ 21 ಸಾವಿರ ರೂಪಾಯಿ ಪತ್ತೆಯಾಗಿದ್ದು, ಅದನ್ನು ಜಪ್ತಿ ಮಾಡಲಾಗಿದೆ. ಜೂಜು ನಿರತ ಎಂಟು ಜನರನ್ನು ಬಂಧಿಸಿ ಆನಂತರ ಠಾಣೆ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು […]
ಧಾರವಾಡದಲ್ಲಿ ಇರಾನಿ ಗ್ಯಾಂಗ್ನ ಮೂವರು ಕಳ್ಳರ ಬಂಧನ
ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸರಗಳ್ಳತನ ಹಾಗೂ ಕೈ ಚಳಕ ತೋರುತ್ತಿದ್ದ ಇರಾನಿ ಗ್ಯಾಂಗ್ನ ಮೂವರು ಕಳ್ಳರನ್ನು ಬಂಧಿಸುವಲ್ಲಿ ಧಾರವಾಡದ ವಿದ್ಯಾಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಕಳ್ಳರನ್ನು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪರ್ಲಿ ಮೂಲದ ಅಲಿರಜಾ ಇರಾನಿ, ಬೀದರನ ಚಿದರಿ ರೋಡ್ ನಿವಾಸಿ ಬಿಲಾಲ ಇರಾನಿ ಮತ್ತು ಮಧ್ಯಪ್ರದೇಶದ ಗುಲಾಮಅಲಿ ಇರಾನಿ ಎಂದು ಗುರುತಿಸಲಾಗಿದೆ. ಅಲ್ಲದೆ, ಬಂಧಿತರಿಂದ ಕೆಟಿಎಂ ಬೈಕ್, ಚಿನ್ನಾಭರಣ, ಮೂರು ಮೊಬೈಲ್ ಸೇರಿ 1.44 ಲಕ್ಷ ಮೌಲ್ಯದ ವಸ್ತು-ಆಭರಣ ಜಪ್ತಿ ಮಾಡಲಾಗಿದೆ. ಈ […]
ಧಾರವಾಡದಲ್ಲಿ ಸಾಲಭಾದೆಯಿಂದ ಬೇಸತ್ತು ರೈತ ಆತ್ಮಹತ್ಯೆ
ಧಾರವಾಡ prajakiran.com : ಸಾಲಭಾದೆಯಿಂದ ಬೇಸತ್ತು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ತಾಲೂಕಿನಲ್ಲಿ ಮಂಗಳವಾರ ನಡೆದಿದೆ. ತಾಲೂಕಿನ ಕುರುಬಗಟ್ಟಿ ಗ್ರಾಮದ ರೈತ ರಾಯಪ್ಪ ರಾಮಪ್ಪ ಹೂಗಾರ (27) ತನ್ನ ತಂದೆ ನರೇಂದ್ರ ಸಿಂಡಿಕೇಟ ಬ್ಯಾಂಕ್ ದಲ್ಲಿ ಮನೆ ಸಾಲ ಹಾಗೂ ಬೆಳೆ ಸಾಲ ಮಾಡಿದ್ದ. ಹೀಗಾಗಿ ಎಂಟು ಲಕ್ಷ ಹೇಗೆ ತೀರಿಸುವುದು ಅಂತಾ ಮನಸ್ಸಿಗೆ ಹಚ್ದಿಕೊಂಡು, ತನ್ನ ದನದ ಮನೆಯಲ್ಲಿ ನೂಲಿನ ಹಗ್ಗದಿಂದ ಎಳೆಗೆ ಉರುಲು ಹಾಕಿಕೊಂಡು ಸತ್ತಿದ್ದಾನೆ ಎಂದು ಮೃತನ ತಾಯಿ ಈ ಕುರಿತು ಗರಗ […]
ಧಾರವಾಡದ ಮಾಳಮಡ್ಡಿಯಲ್ಲಿ ಆಕಸ್ಮಿಕ ಬೆಂಕಿಗೆ ಸುಟ್ಟು ಕರಕಲಾದ ಮನೆ
ಧಾರವಾಡ Prajakiran.com : ಸ್ಮಿಕ ಬೆಂಕಿ ತಗುಲಿದ ಪರಿಣಾಮ ಧಾರವಾಡದ ಮಾಳಮಡ್ಡಿಯಲ್ಲಿ ಮನೆಯೊಂದು ಸುಟ್ಟು ಕರಕಲಾದ ಘಟನೆ ಭಾನುವಾರ ನಡೆದಿದೆ. ಮಹಿಷಿ ಎಂಬುವರಿಗೆ ಸೇರಿದ ಮನೆಯಾಗಿದ್ದು, ಅವರು ಮಧ್ಯಾಹ್ನ ರಾಯರ ಮಠಕ್ಕೆ ಊಟಕ್ಕೆ ಹೋದಾಗ ದುರಂತ ಸಂಭವಿಸಿದೆ. ಹೀಗಾಗಿ ಅದೃಷ್ಟ ವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಮನೆಯಲ್ಲಿ ಯಾರು ಇಲ್ಲದ ಪರಿಣಾಮ ಮನೆಯಲ್ಲೆಡೆ ಬೆಂಕಿ ಆವರಿಸಿಕೊಂಡಿದೆ. ಇದರಿಂದಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ವಿದ್ಯಾಗಿರಿ ಪೊಲೀಸರಿಗೆ […]
ಧಾರವಾಡದಲ್ಲಿ 17 ಬೈಕ್ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರ ಬಂಧಿಸಿದ ಪೊಲೀಸರು
ಧಾರವಾಡ prajakiran.com : ಸುಮಾರು 17 ಬೈಕ್ ಕಳ್ಳತನ ಮಾಡಿದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಧಾರವಾಡದ ವಿದ್ಯಾಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ. 20 ವರ್ಷದ ಇಬ್ಬರು ಯುವಕರು ಈವರೆಗೆ ಒಟ್ಟು ಅಂದಾಜು ಎಙಟು ಲಕ್ಷ ಮೌಲ್ಯದ 17 ಬೈಕ್ ಕಳ್ಳತನ ಮಾಡಿದ್ದರು. ಈ ಕುರಿತು ಪ್ರಕರಣದ ಜಾಡು ಹಿಡಿದ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ಮಹಾಂತೇಶ ಬಸಾಪುರ, ಪಿ ಎಸ್ ಐಗಳಾದ ಸಚಿನಕುಮಾರ ದಾಸರಡ್ಡಿ, ಎಸ.ಆರ್. ತೇಗೂರ ಹಾಗೂ ಪೊಲೀಸ ಸಿಬ್ಬಂದಿ ಈ ಕಳ್ಳರನ್ನು ಪತ್ತೆ ಮಾಡಿ […]
ಧಾರವಾಡದ ಪಾನ್ ಶಾಪ್ ನಲ್ಲಿ ಮೂರನೇ ಬಾರಿಗೆ ಕನ್ನ…!
ಧಾರವಾಡ prajakiran.com : ಧಾರವಾಡದ ಕೆಲಗೇರಿ ರಸ್ತೆಯಲ್ಲಿ ಇರುವ ಸಿಲ್ವರ್ ಆರ್ಚರ್ಡ್ ಕಾಲೋನಿಯ ಮುಖ್ಯ ರಸ್ತೆಯಲ್ಲಿರುವ ಭಾಸ್ಕರ್ ಶೆಟ್ಟಿ ಅವರ ಪಾನ್ ಶಾಪ್ ನ ಸ್ಟೀಲ್ ಶಟರ್ಸ್ ಅನ್ನು ಕಬ್ಬಿಣದ ರಾಡ್ ನಿಂದ ಮುರಿದು ಕಳ್ಳತನ ಮಾಡಲಾಗಿದೆ. ಅಂದಾಜು ಮೂವತ್ತು ಸಾವಿರ ಮೌಲ್ಯದ ಸಾಮಗ್ರಿಗಳನ್ನು ನಿನ್ನೆ ತಡ ರಾತ್ರಿ ಕಳ್ಳರು ಕಳವು ಮಾಡಿದ್ದಾರೆ. ಈ ಹಿಂದೆ ಸಹ ಕಳ್ಳರು ಎರಡು ಸಲ ಭಾಸ್ಕರ್ ಶೆಟ್ಟಿ ಅವರ ಪಾನ್ ಶಾಪ್ ನಲ್ಲಿನ ಸಾವಿರಾರು ರೂಪಾಯಿಯ ಸಾಮಗ್ರಿ ಗಳನ್ನು ಕಳವು […]
ಧಾರವಾಡದಲ್ಲಿ ಮೊಬೈಲ್ ಅಂಗಡಿ, ಮನೆಗಳ್ಳತನ ಮಾಡಿದ ಮೂವರ ಬಂಧನ
ಧಾರವಾಡ prajakiran.com : ನಗರದ ಅಕ್ಕಿಪೇಟೆಯಲ್ಲಿನ ಬಾಬತ್ ಜ್ಯೋತಿಬಾ ಹೆಸರಿನ ಮೊಬೈಲ್ ಅಂಗಡಿ ಕಳ್ಳತನ ಮಾಡಿ, ಸಿಸಿಟಿವಿ ಡಿವಿಆರ್ ತೆಗೆದುಕೊಂಡು ಪರಾರಿಯಾಗಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಕೃಷ್ಣಾ ಕೇದಾರಪ್ಪ ಜಾಧವರಿಗೆ ಸೇರಿದ ಮೊಬೈಲ್ ಅಂಗಡಿಯಲ್ಲಿ ಬೆಲೆಬಾಳುವ ಮೊಬೈಲ್ ಕದ್ದು ಪರಾರಿಯಾದವರನ್ನ ಬಂಧನ ಮಾಡಿದಾಗ, ವಿದ್ಯಾಗಿರಿಯಲ್ಲಿ ನಡೆದ ಮನೆಗಳ್ಳತನದ ಪ್ರಕರಣವೂ ಬಯಲಿಗೆ ಬಂದಿದೆ. , ಬಂಧಿತರನ್ನ ಧಾರವಾಡ ಹೊಸಯಲ್ಲಾಪುರ ಮಿಣಜಗಿ ಚಾಳದ ವಿನೋದ ದುಂಡಪ್ಪ ಕಿರ್ಗಿ, ಕಲಘಟಗಿ ತಾಲೂಕಿನ […]
ಸವದತ್ತಿಯಲ್ಲಿ ಭಾರಿ ಮಳೆಗೆ 45 ಕ್ಕೂ ಹೆಚ್ಚು ಕುರಿಗಳು ಸಾವು
ಸವದತ್ತಿ prajakiran.com : ಇಂದು ಮಧ್ಯಾಹ್ನ ತಾಲೂಕಿನಾದ್ಯಂತ ಸುರಿದ ಗುಡುಗು ಸಹಿತ ಸಿಡಿಲು ಭಾರಿ ಮಳೆಗೆ ನವಿಲುತೀರ್ಥ ಡ್ಯಾಮ್ ಹತ್ತಿರ ಸಿಡಿಲು ಬಡಿದು ಕುರಿಗಾರರ 45 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಇದರಿಂದಾಗಿ ಕುರಿಗಾರರ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು ದಿಕ್ಕೆ ತೋಚದಂತಾಗಿದೆ ಎಂದು ಕಣ್ಣೀರು ಹಾಕಿದ್ದಾರೆ. ಮಾಹಿತಿ ಅರಿತು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸವದತ್ತಿ ಶಾಸಕ ಹಾಗೂ ವಿಧಾನಸಭೆಯ ಉಪಸಭಾದ್ಯಕ್ಷ ಆನಂದ ಮಾಮನಿ ಹಾಗೂ ತಾಲೂಕು ದಂಡಾಧಿಕಾರಿಗಳು ಕುರಿಗಾರರಿಗೆ ಸಾಂತ್ವನ ಹೇಳಿದರು. ಅಲ್ಲದೆ ವಸ್ತು ಸ್ಥಿತಿಯನ್ನು […]