ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸರಗಳ್ಳತನ ಹಾಗೂ ಕೈ ಚಳಕ ತೋರುತ್ತಿದ್ದ ಇರಾನಿ ಗ್ಯಾಂಗ್ನ ಮೂವರು ಕಳ್ಳರನ್ನು ಬಂಧಿಸುವಲ್ಲಿ ಧಾರವಾಡದ ವಿದ್ಯಾಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಕಳ್ಳರನ್ನು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪರ್ಲಿ ಮೂಲದ ಅಲಿರಜಾ ಇರಾನಿ, ಬೀದರನ ಚಿದರಿ ರೋಡ್ ನಿವಾಸಿ ಬಿಲಾಲ ಇರಾನಿ ಮತ್ತು ಮಧ್ಯಪ್ರದೇಶದ ಗುಲಾಮಅಲಿ ಇರಾನಿ ಎಂದು ಗುರುತಿಸಲಾಗಿದೆ.
ಅಲ್ಲದೆ, ಬಂಧಿತರಿಂದ ಕೆಟಿಎಂ ಬೈಕ್, ಚಿನ್ನಾಭರಣ, ಮೂರು ಮೊಬೈಲ್ ಸೇರಿ 1.44 ಲಕ್ಷ ಮೌಲ್ಯದ ವಸ್ತು-ಆಭರಣ ಜಪ್ತಿ ಮಾಡಲಾಗಿದೆ.
ಈ ಮೂವರು ಖದೀಮರು ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಲವು ಕಳ್ಳತನದಲ್ಲಿ ಭಾಗಿಯಾಗಿದ್ದ ಇರಾನಿ ಗ್ಯಾಂಗ್ ಗಳು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ವಿದ್ಯಾಗಿರಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ಮಹಾಂತೇಶ ಬಸಾಪೂರ, ಪಿಎಸ್ ಐ ಸಚಿನಕುಮಾರ ದಾಸರಡ್ಡಿ,ಎಸ್.ಆರ್ ತೇಗೂರ ಹಾಗೂ ಸಿಬ್ಬಂದಿ ಕಾರ್ಯಾಚರಣೆಗೆ ಪೊಲೀಸ್ ಆಯುಕ್ತ ಲಾಬೂ ರಾಮ್ ಅವರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.