ಧಾರವಾಡ prajakiran.com : ಧಾರವಾಡದ ರಾಮನಗರ ಬಡಾವಣೆ ಹತ್ತಿರ ಆಟೋದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆಂಬ ಅಧಿಕೃತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿದ ಹುಬ್ಬಳ್ಳಿ – ಧಾರವಾಡ ಘಟಕದ ಆಂತರಿಕ ಭದ್ರತಾ ವಿಭಾಗ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ. ಬಂಧಿತ ನಾಲ್ಕು ಜನರಲ್ಲಿ ಧಾರವಾಡದ ಹೊಸಯಲ್ಲಾಪುರ ನಿವಾಸಿ ನಿಹಾಲ ವಿಠ್ಠಲ ಲಾಂಡ, ಕಲಘಟಗಿ ತಾಲೂಕಿನ ಡೊಂಬರಿಕೊಪ್ಪ ಗ್ರಾಮದ ಸುಭಾಸ ಪಿರೋಜಿ, ಧಾರವಾಡ ತಪೋವನದ ಅಭಿಷೇಕ ಹಿರೇಮಠ ಹಾಗೂ ಧಾರವಾಡ ರಾಮನಗರದ ಡೆಂಟಲ್ ಟೆಕ್ನಾಲಜಿಸ್ಟ್ ಅಭಿಷೇಕ ಉಲ್ಲಾಳ ಎಂದು ಪೊಲೀಸರು […]
ಅಪರಾಧ
ಧಾರವಾಡದ ಮಾಳಾಪುರದಲ್ಲಿ ಮತ್ತಿಬ್ಬರು ಕ್ರಿಕೆಟ್ ಬುಕ್ಕಿಗಳ ಬಂಧನ
ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡದ ಪೊಲೀಸರ ಬೇಟೆಯ ಮಧ್ಯೆಯೂ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಮತ್ತೆ ಮುಂದುವರೆದಿದೆ. ಈ ಹಿನ್ನಲೆಯಲ್ಲಿ ಅವಳಿನಗರ ಪೊಲೀಸ್ ಕಾರ್ಯಾಚರಣೆ ಕೂಡ ಚುರುಕು ಮುಂದುವರೆದಿದೆ. ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಮತ್ತಿಬ್ಬರನ್ನು ಧಾರವಾಡದ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಾಳಾಪುರದ ರಿಯಾಜ್ಖಾನ್ ಅಲಿಯಾಸ್ ಟೆನ್ಸನ್ ರಿಯಾಜ್ ಹಾಗೂ ಮೆಹಬೂಬ್ ನಗರದ ಅಲ್ಲಾಭಕ್ಷ ಎಂದು ಗುರುತಿಸಲಾಗಿದೆ. ಇವರಿಬ್ಬರು ಆರೋಪಿಗಳು ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಮ್ಯಾಚ್ ಗೆ ಸಂಬಂಧಿಸಿದಂತೆ ಇವರು ಬೆಟ್ಟಿಂಗ್ ಆಡುತ್ತಿದ್ದರು ಎಂದು […]
ಧಾರವಾಡದಲ್ಲಿ ಮುಂದುವರೆದ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ಪೊಲೀಸರಿಂದ ಮತ್ತಿಬ್ಬರ ಬಂಧನ
ಧಾರವಾಡದಲ್ಲಿ ಮುಂದುವರೆದ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ಪೊಲೀಸರಿಂದ ಮತ್ತಿಬ್ಬರ ಬಂಧನ ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿ ನಡೆದಿದೆ. ಅದೇ ರೀತಿ ಪೊಲೀಸ್ ಕಾರ್ಯಾಚರಣೆ ಕೂಡ ಮುಂದುವರೆದಿದೆ. ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರನ್ನು ಧಾರವಾಡದ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಾಳಾಪುರದ ಲತೀಫ್ ತಂಬೋಲಿ ಹಾಗೂ ರಸಲಾಪುರದ ಓಣಿಯ ಇಜಾಜ್ ಅಹ್ಮದ್ ಮನಿಯಾರ್ ಎಂದು ಗುರುತಿಸಲಾಗಿದೆ. ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಮ್ಯಾಚ್ ಗೆ ಸಂಬಂಧಿಸಿದಂತೆ ಇವರು ಬೆಟ್ಟಿಂಗ್ […]
ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು: ಭೈರಗೊಂಡ ಮಹಾದೇವ್ ಸಾಹುಕಾರ್ ಗೆ ಮೂರು ಗುಂಡು, ಸ್ಥಳದಲ್ಲಿಯೇ ಮ್ಯಾನೇಜರ್ ಸಾವು
ವಿಜಯಪುರ prajakiran.com : ಭೀಮಾತೀರದಲ್ಲಿ ಮತ್ತೆ ಸೋಮವಾರ ಗುಂಡಿನ ಸದ್ದು ಮೊಳಗಿದ್ದು, ಮಹಾದೇವ ಸಾಹುಕಾರ್ ಭೈರಗೊಂಡ ಸಂಚರಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿ ಅವರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಮಹಾದೇವ ಭೈರಗೊಂಡ ಅವರ ಸ್ಥಿತಿ ಗಂಭೀರವಾಗಿದೆ. ಅವರ ಹೊಟ್ಟೆ ಭಾಗದಲ್ಲಿ ಎರಡು ಗುಂಡು ತಗುಲಿದ್ದರೆ, ಇನ್ನೊಂದು ಗುಂಡು ಬೆನ್ನಿನ ಪಕ್ಕೆಲುಬಿಗೆ ತಗುಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಗುಂಡಿನ ದಾಳಿಗೆ ಭೈರಗೊಂಡ ಮಹಾದೇವ ಸಾಹುಕಾರ್ ಮ್ಯಾನೇಜರ್ ಬಾಬುರಾಮ್ ಮಾರುತಿ […]
ಧಾರವಾಡದ ಲೋಕೂರ ಶಾಲೆ ಬಾಗಿಲು, ಕಿಡಕಿ ಧ್ವಂಸ ಮಾಡಿದ ಕಿಡಿಗೇಡಿಗಳು…..!
ಧಾರವಾಡ prajakiran.com : ಯಾರೋ ಕಿಡಿಗೇಡಿಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರ್.ಎಂಎಸ್.ಎ. ಅಪ್ ಗ್ರೇಡೆಡ ಶಾಲೆಯ ಕೊಠಡಿ ಬಾಗಿಲ ಹಾಗೂ ಹಿಂದಿನ ಕಿಡಕಿಯನ್ನು ಧ್ವಂಸ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ. ತಾಲೂಕಿನ ಲೋಕೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೇ ಧ್ವಂಸಗೊಂಡಿದೆ. ಈ ಬಗ್ಗೆ ಶಾಲೆಯ ಹೆಡ್ ಮಾಸ್ತರ ಶ್ರೀಮತಿ ಸುಚೇತಾ ಹೂಗಾರ ಗರಗ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಎಂದು […]
ಧಾರವಾಡದ ಗರಗದಲ್ಲಿ ಈಜಲು ಹೋಗಿ ನೀರು ಪಾಲಾದ ಇಬ್ಬರು ಬಾಲಕರು
ಧಾರವಾಡ prajakiran.com : ಕೆರೆಯಲ್ಲಿ ಈಜಲು ಹೋದ ಬಾಲಕರಿಬ್ಬರು ಈಜು ಬಾರದೆ ನೀರಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ಧಾರವಾಡದಲ್ಲಿ ಸೋಮವಾರ ನಡೆದಿದೆ. ತಾಲೂಕಿನ ಗರಗ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಇದರಿಂದಾಗಿ ಆದಿನಾಥ್ ಸಂಗೊಳ್ಳಿ (13) ಹಾಗೂ ಸುಭಾಷ ಸಂಗೊಳ್ಳಿ (13) ಎಂಬ ಬಾಲಕರೇ ಸಾವನ್ನಪ್ಪಿದ್ದ ಬಾಲಕರಾಗಿದ್ದಾರೆ. ಗರಗ ಗ್ರಾಮದ ಮಂಗಳಗಟ್ಟಿ ರಸ್ತೆಯಲ್ಲಿ ಇರುವ ಕೆರೆಯಲ್ಲಿ ಈಜಲು ಹೋಗಿದ್ದ ಈ ಬಾಲಕರು ಈಜು ಬರದೇ ಸಾವನ್ನಪ್ಪಿದ್ದಾರೆ ಎಂದು ಗರಗ ಪೊಲೀಸರು ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ. […]
ಧಾರವಾಡದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ಚೀನಿ ಬಸು, ಕಿರಣ ಅಂದರ್
ಧಾರವಾಡ prajakiran.com : ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಹೆಸರಿನಲ್ಲಿ ಧಾರವಾಡದಲ್ಲಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮಾಜಿ ಸಚಿವರ ಆಪ್ತನೊಬ್ಬ ಸೇರಿ ಇಬ್ಬರು ಹುಬ್ಬಳ್ಳಿ-ಧಾರವಾಡ ಪೊಲೀಸರ ಬಲೆಗೆ ಭಾನುವಾರ ರಾತ್ರಿ ಬಿದ್ದಿದ್ದಾರೆ. ಧಾರವಾಡದ ಕಮಲಾಪುರದಲ್ಲಿ ಕಳೆದ ಹಲವು ದಿನಗಳಿಂದ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿರುವ ಮಾಹಿತಿಯ ಆಧಾರದ ಮೇಲೆ ಅದರ ಬೆನ್ನು ಹತ್ತಿದ್ದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಪಿ. ಕೃಷ್ಣಕಾಂತ, ಆರ್.ಬಿ. ಬಸರಗಿ, ಎಸಿಪಿ ಅನುಷಾ ಜಿ., ಸಿಸಿಬಿ ಇನ್ಸಪೆಕ್ಟರ್ ಗಳಾದ […]
ಧಾರವಾಡದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ಗುದ್ದಿದ ಕಾರು ….!
ಧಾರವಾಡ : ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಗೆ ಗುದ್ದಿದ ಘಟನೆ ಧಾರವಾಡದಲ್ಲಿ ಸೋಮವಾರ ನಡೆದಿದೆ. ಅದರ ಪರಿಣಾಮವಾಗಿ ಸಂಪೂರ್ಣ ಕಾರು ಜಖಂಗೊಂಡಿದ್ದು, ಧಾರವಾಡದ ಸಾಧನಕೆರಿಯ ಜನತೆ ಬೆಚ್ಚಿ ಬಿದ್ದಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗೋವಾ ರಸ್ತೆ ಮೂಲಕ ಹೊರಟಿದ್ದ ವೇಳೆ ಮನೆಯೊಂದರ ಕಂಪೌಂಡ್ ಗೆ ಈ ಕಾರು ಗುದ್ದಿದೆ. ಗುದ್ದಿದ ರಭಸಕ್ಕೆ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದ್ದು, ಗ್ಲಾಸು ಪುಡಿ ಪುಡಿಯಾಗಿದೆ. Share on: […]
ಧಾರವಾಡದಲ್ಲಿ ಹೊಲದ ಸಮೀಪ ನಿಲ್ಲಿಸಿದ್ದ ಬೈಕ್ ಕಳ್ಳತನ
ಧಾರವಾಡ prajakiran.com : ಹೊಲದ ಸಮೀಪ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ ಪ್ರಕರಣ ಧಾರವಾಡ ದಲ್ಲಿ ನಡೆದಿದೆ. ತಾಲೂಕಿನ ನಾಯಕನ ಹೂಲಿಕಟ್ಟಿ ಕ್ರಾಸ್ ಬಳಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಯರಿಕೊಪ್ಪ ಗ್ರಾಮದ ಗದಿಗೆಪ್ಪ ದೊಡ್ಡಪ್ಪ ಹುಲಿಯಪ್ಪನವರ ಎಂಬುವರ ಬೈಕ್ (ಕೆಎ-೨೫,ಇಆರ್-೩೫೭೪) ಕಳ್ಳತನವಾಗಿದೆ. ಅವರು ಕಳೆದ ದಿ.೨೧ ರಂದು ನಾಯಕನ ಹೂಲಿಕಟ್ಟಿ ಕ್ರಾಸ್ ಬಳಿಯಿರುವ ತಮ್ಮ ಹೊಲದ ಸಮೀಪ ನಿಲ್ಲಿಸಿದಾಗ ಕಳ್ಳತನ ಮಾಡಲಾಗಿದೆ ಎಂದು ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಧಾರವಾಡ ಗ್ರಾಮೀಣ […]
ಧಾರವಾಡದ ಕವಲಗೇರಿಯಲ್ಲಿ ತಾಯಿ ಸಾವನ್ನಪ್ಪಿದಕ್ಕೆ ಮನನೊಂದ ಮಗ ಆತ್ಮಹತ್ಯೆ
ಧಾರವಾಡ prajakiran.com : ತಾಯಿ ಸಾವನ್ನಪ್ಪಿದಕ್ಕೆ ಮನನೊಂದ ಮಗನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಕವಲಗೇರಿ ಗ್ರಾಮದ ಮಹಾಂತೇಶ ಸುಂಕಣ್ಣನವರ (28) ಎಂಬ ಯುವಕನೇ ಆತ್ಮಹತ್ಯೆ ಮಾಡಿಕೊಂಡ ದುದೈವಿ ಎಂದು ತಿಳಿದುಬಂದಿದೆ. ಐದು ತಿಂಗಳ ಹಿಂದೆಯಷ್ಟೇ ಅವನ ತಾಯಿ ಸಹ ಮರಣ ಹೊಂದಿದ ಹಿನ್ನೆಲೆಯಲ್ಲಿ ಆತ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೆಲಸ ಮುಗಿಸಿ ಮನೆಗೆ ಬಂದು ಮನೆಯಲ್ಲಿ ಯಾರೂ ಇಲ್ಲದ […]