ಧಾರವಾಡ prajakiran.com : ಯಾರೋ ಕಿಡಿಗೇಡಿಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರ್.ಎಂಎಸ್.ಎ. ಅಪ್ ಗ್ರೇಡೆಡ ಶಾಲೆಯ ಕೊಠಡಿ ಬಾಗಿಲ ಹಾಗೂ ಹಿಂದಿನ ಕಿಡಕಿಯನ್ನು ಧ್ವಂಸ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.
ತಾಲೂಕಿನ ಲೋಕೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೇ ಧ್ವಂಸಗೊಂಡಿದೆ.
ಈ ಬಗ್ಗೆ ಶಾಲೆಯ ಹೆಡ್ ಮಾಸ್ತರ ಶ್ರೀಮತಿ ಸುಚೇತಾ ಹೂಗಾರ ಗರಗ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.
ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.