ಅಪರಾಧ

ಧಾರವಾಡದಲ್ಲಿ ಗುಡಿ ಕಳ್ಳತನ ಮಾಡಿದ್ದ ಆರೋಪಿಯ ಬಂಧನ

ಧಾರವಾಡ prajakiran.com : ಬೈಕ್ ಮತ್ತು ಗುಡಿಯಲ್ಲಿ ಕಳ್ಳತನ ಮಾಡಿದ ಆರೋಪಿಯ ಓರ್ವನನ್ನು ಇಲ್ಲಿನ ವಿದ್ಯಾಗಿರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಜನ್ನತ್ ನಗರ ನಿವಾಸಿ ಮಹಬೂಬಾಲಿ ಉಫ್೯ ಮಾಬುಲಿ ಉಫ್೯ ಮಾಬ್ಯಾ ಬಾಬುಸಾಬ ಅತ್ತಾರ ಬಂಧಿತ ಆರೋಪಿ.

ಈತನಿಂದ ಒಂದು ಬೈಕ್ ಜಪ್ತಿ ಮಾಡಲಾಗಿದೆ.
ಆರೋಪಿಯು ಶಹರ ಠಾಣೆ ವ್ಯಾಪ್ತಿಯ ಹೊಸಯಲ್ಲಾಪೂರದಲ್ಲಿ ಮಂಗ್ಯಾನ ಮಹಲ್ ಬಳಿ ಬೈಕ್ ಮತ್ತು ಮಂಗಳವಾರ ಪೇಟೆಯ ಮುದಿಮಾರುತಿ ದೇವಸ್ಥಾನದಲ್ಲಿನ ಕಾಣಿಕೆ ಪೆಟ್ಟಿಗೆ ಕಳ್ಳತನ ಮಾಡಿದ್ದನು.

ಸಿಪಿಐ ಎಂ.ಕೆ.ಬಸಾಪುರ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ಸಚಿನಕುಮಾರ ದಾಸರಡ್ಡಿ, ಎಸ್.ಆರ್.ತೇಗೂರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಿ.ಎಂ.ಅಂಗಡಿ, ಎ.ಬಿ.ನರೇಂದ್ರ, ಎಂ.ಎಫ್
ನದಾಫ್, ಐ.ಎ.ಬುರ್ಜಿ, ಆರ್.ಕೆ.ಪತ್ತಾರ, ಎಂ.ಸಿ.ಮಂಕಣಿ, ಬಿ.ಎಂ.ಪಟಾತ್, ಎಂ.ಜಿ.ಪಾಟೀಲ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *