ಧಾರವಾಡ prajakiran.com : ಸಾಲಭಾದೆಯಿಂದ ಬೇಸತ್ತು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ತಾಲೂಕಿನಲ್ಲಿ ಮಂಗಳವಾರ ನಡೆದಿದೆ.
ತಾಲೂಕಿನ ಕುರುಬಗಟ್ಟಿ ಗ್ರಾಮದ ರೈತ ರಾಯಪ್ಪ ರಾಮಪ್ಪ ಹೂಗಾರ (27) ತನ್ನ ತಂದೆ ನರೇಂದ್ರ ಸಿಂಡಿಕೇಟ ಬ್ಯಾಂಕ್ ದಲ್ಲಿ ಮನೆ ಸಾಲ ಹಾಗೂ ಬೆಳೆ ಸಾಲ ಮಾಡಿದ್ದ.
ಹೀಗಾಗಿ ಎಂಟು ಲಕ್ಷ ಹೇಗೆ ತೀರಿಸುವುದು ಅಂತಾ ಮನಸ್ಸಿಗೆ ಹಚ್ದಿಕೊಂಡು, ತನ್ನ ದನದ ಮನೆಯಲ್ಲಿ ನೂಲಿನ ಹಗ್ಗದಿಂದ ಎಳೆಗೆ ಉರುಲು ಹಾಕಿಕೊಂಡು ಸತ್ತಿದ್ದಾನೆ ಎಂದು ಮೃತನ ತಾಯಿ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.