ಧಾರವಾಡ prajakiran.com : 14ರ ಬಾಲಕಿಯನ್ನು ಅತ್ಯಾಚಾರ ನಡೆಸಿ, ಪರಾರಿಯಾಗಿದ್ದ ಕಿರಾತಕನನ್ನು ಧಾರವಾಡ ಮಹಿಳಾ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತನನ್ನು ಶಿಂಗನಹಳ್ಳಿ ಗ್ರಾಮದ 24 ವರ್ಷದ ಬಸೀರ್ ಮಾಬುಸಾಬ ಗಡದವರ ಎಂದು ಗುರುತಿಸಲಾಗಿದೆ.
ಈ ಕುರಿತು ಪ್ರಜಾಕಿರಣ.ಕಾಮ್ ನೊಂದಿಗೆ ಮಾತನಾಡಿದ ಧಾರವಾಡ ಡಿವೈಎಸ್ಪಿ ರವಿ ನಾಯ್ಕಅವರು ಆರೋಪಿಯನ್ನು ನಿನ್ನೇ ರಾತ್ರಿಯೇ ಬಂಧಿಸಲಾಗಿದ್ದು, ಮಹಿಳಾ ಠಾಣೆಯ ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ವಿವರ :
ಜು. 30 ರಂದು ಗುರುವಾರ ಧಾರವಾಡದ …….ಗ್ರಾಮದ 8 ನೇ ತರಗತಿ ಓದುತ್ತಿದ್ದ 14 ವರ್ಷದ ಬಾಲಕಿ ಮಠಕ್ಕೆ ತೆರಳಿದ್ದಾಗ ಹೊಂಚು ಹಾಕಿ ಆಕೆಯನ್ನು ಪಕ್ಕದ ಹೊಲದ ಆರೋಪಿ ಬಶೀರ್ ಮಾಬುಸಾಬ ಗಡಾದವರ ಕಬ್ಬಿನ ಗದ್ದೆಗೆ ಎಳೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿ ಬಾಲಕಿಗೆ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದ.
ಈ ವಿಷಯ ಯುವತಿ ಮರ್ಯಾದೆಗೆ ಅಂಜಿ ಪಾಲಕರ ಎದುರು ಒಂದು ದಿನ ಮುಚ್ಚಿಟ್ಟುಕೊಂಡಿದ್ದಳು.
ಮರುದಿನ ಆಕೆ ತನ್ನ ತಾಯಿಯ ಮುಂದೆ ಈ ಕುರಿತು ಅಳಲನ್ನು ತೋಡಿಕೊಂಡು ಆತ್ಮಹತ್ಯೆಯ ದಾರಿ ತುಳಿದಿದ್ದಳು. ಕೀಟನಾಟಕ (ವಿಷ) ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಮಗಳನ್ನು ತಕ್ಷಣ ಕಿತ್ತೂರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.
ಆದರೆ ಅವರು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದರು. ಆದರೆ ಬಾಲಕಿ ಚಿಕಿತ್ಸೆ ಫಲಿಸದೆ ಭಾನುವಾರ ಸಾವನ್ನಪ್ಪಿದ್ದಳು.
ಈ ಘಟನೆ ಯಿಂದ ಧಾರವಾಡ ತಾಲೂಕಿನ ಬೋಗುರು ಹಾಗೂ ಶಿಂಗನಳ್ಳಿ ಗ್ರಾಮಸ್ಥರು ಆತಂಕ ಗೊಂಡಿದ್ದರು.
ಅಲ್ಲದೆ, ಇದರಿಂದ ನೋಂದ ಪಾಲಕರು ನಮಗೆ ನ್ಯಾಯ ಬೇಕು ಎಂದು ಧಾರವಾಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಆರೋಪಿ ಬಶೀರ್ ಮಾಬುಸಾಬ ಗಡಾದವರ ವಿರುದ್ದ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.