ಧಾರವಾಡ prajakiran.com : ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಆದ ಶಂಕರ ಪಾಟೀಲ ಮುನೇನಕೊಪ್ಪಅವರ ಹಿರಿಯ ಸಹೋದರ ಹಾಗೂ ಪ್ರಗತಿಪರ ರೈತ ಹನುಮಂತಗೌಡ ಬ ಪಾಟೀಲ ಮುನೇನಕೊಪ್ಪ ಅವರು ಅಕಾಲಿಕವಾಗಿ ನಿಧನ ಹೊಂದಿದ್ದಾರೆ.
ಅವರು ಸೋಮವಾರ ಬೆಳಗಿನ ಜಾವ ಅಮರಗೋಳ ದ ಸ್ವಗೃಹದಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ದಿವಂಗತ ಹನುಮಂತಗೌಡ ಬ ಪಾಟೀಲ ಮುನೇನಕೊಪ್ಪ ಅವರ ಅಂತ್ಯಕ್ರಿಯೆ ನವಲಗುಂದ ತಾಲೂಕಿನ ಸ್ವಗ್ರಾಮ ಅಮರಗೋಳ ದಲ್ಲಿ ಸೋಮವಾರ ಸಾಯಂಕಾಲ 5 ಗಂಟೆಗೆ ಜರುಗಲಿದೆ ಎಂದು ತಿಳಿದುಬಂದಿದೆ.
ಅವರ ಅಗಲಿಕೆಯಿಂದ ಶಾಸಕರು ಹಾಗೂ ಅವರ ಕುಟುಂಬಸ್ಥರ ಜಂಗಾಬಲವೇ ಕುಸಿದುಹೋಗಿದೆ. ಅವರಅಗಲಿಕೆಯ ನೋವು ಭರಿಸುವ ಶಕ್ತಿ ಕುಟುಂಬವರ್ಗದವರಿಗೆ ನೀಡಲಿ ಎಂದು ಅನೇಕರು ಕಂಬನಿ ಮಿಡಿದಿದ್ದಾರೆ.