ಬಳ್ಳಾರಿ prajakiran.com : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಲುಕಿ ಬಳ್ಳಾರಿ ಜಿಲ್ಲೆ ಪ್ರವೇಶದಿಂದ ದೂರ ಉಳಿದಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ 3 ವರ್ಷದ ಬಳಿಕ ತವರೂರು ಬಳ್ಳಾರಿಗೆ ಶುಕ್ರವಾರ ಕಾಲಿಟ್ಟಿದ್ದಾರೆ.
ಶುಕ್ರವಾರ ಕುಟುಂಬಸ್ಥರ ಜೊತೆಗೆ ವರಮಹಾಲಕ್ಷ್ಮೀ ಪೂಜೆಯಲ್ಲಿ ಪಾಲ್ಗೊಂಡು ಧನ್ಯತಾ ಭಾವ ಮೆರದರು.
ಬೆಳಗ್ಗಿನ ಜಾವವೇ ಬಳ್ಳಾರಿಗೆ ಬಂದ ಗಾಲಿ ಜನಾರ್ಧನ ರೆಡ್ಡಿ, ಬಳ್ಳಾರಿಯ ಸಿರುಗುಪ್ಪ ರಸ್ತೆಯ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಪೂಜೆಯಲ್ಲಿ ಭಾಗಿಯಾದರು.
ಅವರಿಗೆ ಕುಟುಂಬಸ್ಥರು ಸಾಥ್ ನೀಡಿ ಪೂಜೆ ಸಲ್ಲಿಸಿದರು.
ಈ ವೇಳೆ ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ನೆನಪು ಮೆಲಕು ಹಾಕಿ ಗತವೈಭವ ಸ್ಮರಿಸಿದರು.
ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಬಳ್ಳಾರಿಗೆ ಆಗಮಿಸಿರುವ ಬಗ್ಗೆ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು.