ಧಾರವಾಡ prajakiran.com : ಸ್ನಾನ ಮಾಡಲು ಹೋದ ಇಬ್ಬರು ಬಾಲಕರು ಕೆರೆಯಲ್ಲಿ ಮುಳಗಿ ಸಾವನ್ನಪ್ಪಿದ ಪ್ರಕರಣ ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶರೀಫ್ ಮೌಲಾಸಾಬ ನದಾಫ್ (೨೨) ಮತ್ತು ಕಾಸೀಮಸಾಬ ಮಕ್ತುಂಸಾಬ ನದಾಫ್ (೧೬) ಎಂಬುವರೇ ಮೃತಪಟ್ಟ ದುರ್ದೈವಿಗಳು.
ಇಂದು ಮುಂಜಾನೆ ಊರ ಮುಂದಿನ ಹಳಕೇರಿ ಕೆರೆಗೆ ಸ್ನಾನ ಮಾಡಲು ತೆರಳಿದ್ದರು.
ಈ ಸಂದರ್ಭದಲ್ಲಿ ಕಾಸೀಮಸಾಬ ಕಾಲು ಜಾರಿ ನೀರಲ್ಲಿ ಬಿದ್ದಿದ್ದಾನೆ. ಆಗ ಆತನ ಕೈ ಹಿಡಿದು ಉಳಿಸಲು ಯತ್ನಿಸಿದ ಶರೀಫ್ ಕೂಡ ನೀರಲ್ಲಿ ಮುಳುಗಿದ್ದಾನೆ.
ಈಜು ಬಾರದ ಕಾರಣ ಇಬ್ಬರೂ ಕೆರೆಯಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಪಿಎಸ್ಐ ಕಿರಣ ಮೋಹಿತೆ ಭೇಟಿ ನೀಡಿದ್ದರು. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.