ತಿಪಟೂರು prajakiran.com : ವೀರಶೈವ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಮಾಡುತ್ತಿರುವ ಹುನ್ನಾರದ ವಿರುದ್ದ ನಾಡಿನ ಮಠಾಧೀಶರು ಬೀದಿಗಿಳಿದು ಹೋರಾಟ ಮಾಡಲಿದ್ದಾರೆ ಎಂದು ತಿಪಟೂರಿನ ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಎಚ್ಚರಿಸಿದರು.
ಅವರು ನಗರದ ಶರಕ್ಷರ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುರುಬ ಸಮುದಾಯಕ್ಕೆ ಸಿದ್ದರಾಮಯ್ಯ, ಒಕ್ಕಲಿಗ ಸಮುದಾಯಕ್ಕೆ ಹೆಚ್ ಡಿ ದೇವೇಗೌಡ ನಾಯಕರಾದರೆ ಅದೇ ರೀತಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಯಡಿಯೂರಪ್ಪನವರು ಪ್ರಶ್ನಾತೀತ ನಾಯಕರು ಎಂದು ಹೇಳಿದರು.
ಬಿಎಸ್ ವೈ ಅವರಿಂದ ರಾಜ ಬಿಜೆಪಿ ಅಸ್ತಿತ್ವ ಉಳಿಸಿಕೊಂಡಿದೆ. ಇಲ್ಲಿ ವಯಸ್ಸಿಗೆ ಯಾವುದೇ ಮಾನದಂಡವಿಲ್ಲ. ಕರುಣಾನಿಧಿ ಅವರು 20 ವರ್ಷ ವೀಲ್ ಚೇರಿನಲ್ಲಿ ರಾಜ್ಯಭಾರ ಮಾಡಿದ್ದು ನೆನಪಿದೆ ಎಂದು ಗುಟುರು ಹಾಕಿದರು.
ಆದರೆ ಇಳಿವಯಸ್ಸಿನಲ್ಲಿ ಯುವಕರೇ ನಾಚುವ ರೀತಿ ನಮ್ಮ ಯಡಿಯೂರಪ್ಪನವರು ರಾಜ್ಯದ ಜನರಹಿತ ಕಾಯುತ್ತಿದ್ದಾರೆ. ಇಂತಹವರನ್ನು ಬದಲಾಯಿಸುವುದರ ಹುನ್ನಾರವನ್ನು ವೀರಶೈವ ಸಮುದಾಯಕ್ಕೆ ಆಘಾತ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ಅವರನ್ನು ಮೂರು ವರ್ಷ ಅವಧಿ ಪೂರ್ಣಗೊಳಿಸಲು ಸಹಕರಿಸುವುದು ಒಳಿತು. ಯಡಿಯೂರಪ್ಪನವರ ಅವಧಿಯಲ್ಲಿ ರಾಜ್ಯದಲ್ಲಿ ಶಾಂತಿ ನೆಲೆಸಿದೆ. ಕಾಲ ಕಾಲಕ್ಕೆ ಮಳೆಯಾಗುತ್ತಿದೆ ಮಾರಕ ಕರುನಾ ವಿರುದ್ಧ ಹೋರಾಟವನ್ನು ಎಲ್ಲರೂ ಪ್ರಶಂಸಿಸಿದ್ದಾರೆ ಎಂದು ಶ್ಲಾಘಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ತಮ್ಮಡಿಹಳ್ಳಿ ಚನ್ನಮಲ್ಲಿಕಾರ್ಜುನ ಸ್ವಾಮಿಗಳು, ಉಜ್ಜನಿ ಸ್ವಾಮೀಜಿಗಳು, ಕೋಡಿಹಳ್ಳಿ ಸ್ವಾಮೀಜಿ ಸೇರಿದಂತೆ ನಾಡಿನ ಹಲವು ಮಠಗಳ 10ಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಿದ್ದರು.