ಮಂತ್ರಾಲಯ prajakiran.com : ನಾಡಿನ ಕೋಟ್ಯಾಂತರ ಭಕ್ತರ ಆರಾದ್ಯದೈವವಾಗಿರುವ ಶ್ರೀಗುರುರಾಘವೇಂದ್ರ ಸ್ವಾಮೀಜಿಗಳ 349ನೇ ಆರಾಧನಾ ಮಹೋತ್ಸವ ಸೋಮವಾರದಿಂದ ಆರಂಭವಾಗಿದೆ.
ತುಂಗಭದ್ರ ನದಿಯ ದಂಡೆಯ ಮೇಲಿರುವ ಪುಣ್ಯಕ್ಷೇತ್ರವಾದ ಮಂತ್ರಾಲಯದಲ್ಲಿ ಪುಣ್ಯಸ್ನಾನ ಮಾಡಿ ಗುರುಗಳ ಆರ್ಶೀವಾದ ಪಡೆದು, ಅವರ ಸನ್ನಿಧಾನದಲ್ಲಿ ಕೆಲವು ಹೊತ್ತು ಕುಳಿತರೆ ಸಾಕು, ರಾಯರ ಆರ್ಶೀವಾದದ ಫಲವಾಗಿ ಸಕಲ ಸಂಕಷ್ಟಗಳು ನಿವಾರಣೆ, ಸನ್ಮಮಂಗಲವಾಗುವುದು ಭಕ್ತರ ಇಷ್ಟಾರ್ಥ ಸಿದ್ದಿಸುವುದು ವಾಡಿಕೆ.
ಕರೋನಾ ಸಂಕಷ್ಟದ ಹಿನ್ನಲೆಯಲ್ಲಿ ಈ ಬಾರಿ ಭಕ್ತರ ದಂಡು ಸೇರುವುದು ಬಹುತೇಕ ಕಡಿಮೆ ಎನ್ನಲಾಗಿದೆ. ಹೀಗಾಗಿ ರಾಜ್ಯದ ಜನತೆ ಈ ಬಾರಿ ಮನೆಯಿಂದಲೇ ಶ್ರೀ ಗುರು ರಾಘವೇಂದ್ರ ಶ್ರೀಗಳ ಸ್ಮರಣೆ ಮಾಡಿ ಆರೋಗ್ಯ, ಸಂತೋಷ, ಸಮೃದ್ಧಿ ಮತ್ತು ದೀರ್ಘಾಯುಷ್ಯ, ನೆಮ್ಮದಿಗಾಗಿ ಪ್ರಾರ್ಥಿಸಿದ್ದಾರೆ.
ನಾಡಿನ ಎಲ್ಲಾ ಜನತೆಗೆ ಶ್ರೀ ಗುರುರಾಯರು ಎಲ್ಲವನ್ನು ಕರುಣಿಸಲಿ ಎಂದು ನಾವು ಕೂಡ ರಾಘವೇಂದ್ರ ಶ್ರೀಗಳಲ್ಲಿ ಪ್ರಾರ್ಥಿಸೋಣ.
ಈ ಹಿಂದೆ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ಗಡಿ ಭಾಗವಾಗಿರುವುದರಿಂದ ಮಂತ್ರಾಲಯಕ್ಕೆ ಹೋಗಿ ಬಂದವರು ಕ್ವಾರಂಟಿನ್ ಕಡ್ಡಾಯವಾಗಿದ್ದರಿಂದ ಭಕ್ತರಿಗೆ ಗೋಂದಲವಾಗಿತ್ತು.