ಸಿನಿಮಾ

ತಮಿಳು ಹಾಸ್ಯ ನಟ ವಿವೇಕ್ ಇನ್ನು ನೆನಪು ಮಾತ್ರ

ಚೆನ್ನೈ (ತಮಿಳುನಾಡು) prajakiran.com : ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ತಮಿಳು ಹಾಸ್ಯ ನಟ ವಿವೇಕ್ (59) ಶನಿವಾರ ಬೆಳಗಿನ ಜಾವ 4.55 ಕ್ಕೆ ವಿಧಿವಶರಾದರು. ವಿವೇಕ್ ಅವರಿಗೆ ಗುರುವಾರ ಎದೆನೋವು ಕಾಣಿಸಿಕೊಂಡಿದ್ದರಿಂದ ಚೆನ್ನೈನ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೇಯಷ್ಟೇ ಆರೋಗ್ಯ ಪರಿಶೀಲನೆ ಮಾಡಿದ್ದ  ವೈದ್ಯರು ವಿವಿಧ ತಪಾಸಣೆ ಮಾಡಿದ್ದರು. ವಿವೇಕ್ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಬೆಳಗಿನ ಜಾವ ಮತ್ತೆ ಹೃದಯಾಘಾತವಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ಸಿಮ್ಸ್ ಆಸ್ಪತ್ರೆ ವೈದ್ಯ […]

ಸಿನಿಮಾ

ರಂಗಾಸಕ್ತರ ಕುತೂಹಲ ಕೆರಳಿಸಿದ ‘ದ್ವಂದ್ವ’

ಸೋಮು ರಡ್ಡಿ ಅವರ ಹೊಸ ನಾಟಕ ಧಾರವಾಡ prajakiran.com : ವಿಶ್ವ ರಂಗಭೂಮಿ ದಿನದ ಪ್ರಯುಕ್ತ ಮಾ.27 ರಂದು ಸಂಜೆ ೬ ಗಂಟೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಅವರ ಸಹಯೋಗದಲ್ಲಿ ತಲಾಷ್ ನಾಟಕ ಖ್ಯಾತಿಯ ಸೋಮು ರೆಡ್ಡಿ ಅವರ ಹೊಸ ನಾಟಕ ’ದ್ವಂದ್ವ’  ಪ್ರದರ್ಶನವಾಗಲಿದೆ. ಸರ್ಕಾರಿ ಹುದ್ದೆಯಲ್ಲಿರುವ ಕ್ಯಾನ್ಸರ್ ರೋಗಿಯೊಬ್ಬನ ಆತ್ಮಕಥನದಂತಿರುವ ಈ ನಾಟಕ ಮಾನವೀಯ ಸಂಬಂಧಗಳು, ಮಗ-ತಂದೆ-ಸೊಸೆಯ ನಡುವಿರುವ ಕೌಟುಂಬಿಕ ಕಲಹಗಳು, ಮನಸ್ಥಾಪಗಳು ಹೀಗೆ ಒಟ್ಟಾರೆ ವರ್ತಮಾನದ ಕೌಟುಂಬಿಕ ಮತ್ತು […]

ಸಿನಿಮಾ

ಮಾಜಿ ಸಚಿವ ವಿನಯ ಕುಲಕರ್ಣಿ ಧಾರವಾಡ ಮನೆಗೆ ನಟ ದರ್ಶನ ಭೇಟಿ

ಧಾರವಾಡ prajakiran.com : ಜಿಪಂ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಸಿಬಿಐ ಬಂಧನಕ್ಕೆ ಒಳಗಾಗಿ ಸದ್ಯ ಬೆಳಗಾವಿ ಜಿಲ್ಲೆಯ ಹಿಂಡಲಗಾ ಜೈಲು ಸೇರಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಧಾರವಾಡ ಮನೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ ತೂಗುದೀಪ ಭೇಟಿ ನೀಡಿದರು. ಭಾನುವಾರ ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ರಾಬರ್ಟ್ ಚಿತ್ರದ ಕಾರ್ಯಕ್ರಮ ಮುಗಿಸಿಕೊಂಡು ಬಂದಿದ್ದು ವಿಶೇಷವಾಗಿತ್ತು. ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜೊತೆಗೆ ಕಳೆದ ಹಲವು ವರ್ಷಗಳಿಂದ ಆಪ್ತ ಒಡನಾಟ […]

ಸಿನಿಮಾ

ಧಾರವಾಡದ ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ಪವರ್ ಸ್ಟಾರ್ ವಿಶೇಷ ಪೂಜೆ

ಧಾರವಾಡ prajakiran.com : ಧಾರವಾಡದ ಸುಪ್ರಸಿದ್ಧ ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ  ಕನ್ನಡ ಚಿತ್ರರಂಗದ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.  ಎರಡು ದಿನಗಳ‌ ಹಿಂದೆ ದಾಂಡೇಲಿಯ ಪ್ರವಾಸಕ್ಕೆ ಬಂದಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮರಳಿ ಬೆಂಗಳೂರಿಗೆ ಹೋಗುವಾಗ ಧಾರವಾಡದ ಪವಾಡ ದೇವರಾದ ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ   ಭೇಟಿ ವಿಶೇಷ‌ ಪೂಜೆ ಸಲ್ಲಿಸಿ ಆಂಜನೇಯನ ಆಶಿರ್ವಾದ ಪಡೆದಿದ್ದಾರೆ. ನುಗ್ಗಿಕೇರಿ ಆಂಜನೇಯನಿಗೆ ಈ ಹಿಂದೆ ಹಿರಿಯ ನಟಅಂಬರೀಷ್ ಮಂಡ್ಯ ಸಂಸದೆ ಸುಮಲತಾ […]

ಸಿನಿಮಾ

ಬೇಡಿಕೆ ಈಡೇರಿಸುವರೆಗೂ ಸಿನಿಮಾ ಪ್ರದರ್ಶನವಿಲ್ಲ ಅಂದ ಮಾಲೀಕರು

ಧಾರವಾಡ  prajakiran.com : ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಕಳೆದ ಎಂಟು ತಿಂಗಳಿಂದ ಬಾಗಿಲು ಮುಚ್ಚಿದ ಸಿನಿಮಾ ಮಂದಿರಗಳನ್ನು ಲಾಕ್ ಡೌನ್ ತೆರವಾದ ನಂತರ ಮಾಲಿಕರು ಸಿನಿಮಾ ಬಾಗಿಲು ತೆರೆದು,ಚಿತ್ರ ಪ್ರದರ್ಶನ ಮಾಡುತ್ತಾರೆ ಎಂಬ ಚಿತ್ರ ರಸಿಕರ ಕನಸು ಹುಸಿಯಾಗಿದೆ. ಹೌದು ! ಒಂದೆಡೆ ಕೋವಿಡ್ ಸೋಂಕು ನಿಯಂತ್ರಿಸುವ ಸಲುವಾಗಿ ಸರ್ಕಾರ ಹತ್ತು ಹಲವಾರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಲಾಕ್ ಡೌನ್ ಘೋಷಣೆ ಮಾಡಿತ್ತು. ಇದರಿಂದಾಗಿ ಸಣ್ಣ ವ್ಯಾಪಾರಿಗಳಿಂದ ಉದ್ಯಮಗಳಿಂದ ಎಲ್ಲಾ ರೀತಿಯ ಉದ್ಯಮಗಳು ನೆಲಕಚ್ಚಿದ್ದವು. ಆದರೆ ಲಾಕ್ […]

ಸಿನಿಮಾ

ಜಾರಿ ನಿರ್ದೇಶನಾಲಯ ವಿಚಾರಣೆ ವೇಳೆ ನಟಿ ರಾಗಿಣಿ ಕಣ್ಣೀರು

ಬೆಂಗಳೂರು prajakiran.com : ಡ್ರಗ್ಸ್ ಜಾಲದ ಆರೋಪಿಗಳ ನಂಟು ಹೊಂದಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಪರಪ್ಪನಅಗ್ರಹಾರ ಸೇರಿರುವ ನಟಿ ರಾಗಿಣಿ ಅಕ್ರಮ ಹಾಗೂ ಬೇನಾಮಿ ಆಸ್ತಿ ಸಂಪಾದನೆ ಸಂಕಷ್ಟ ಎದುರಿಸುತ್ತಿದ್ದಾರೆ. ಅವರನ್ನು ಜೈಲಿನಲ್ಲಿಯೇ ವಿಚಾರಣೆ ನಡೆಸಿರುವ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿರುವ ನಟಿ ರಾಗಿಣಿ ವಿಚಾರಣೆ ವೇಳೆ ಕಣ್ಣೀರು ಹಾಕಿದ್ದಾರೆ. ಕನ್ನಡಕ್ಕೆ ಹೇಗೆ ಬಂದಿರಿ, ಎಷ್ಟು ಸಿನಿಮಾಗಳಲ್ಲಿ ನಟಿಸಿದ್ದಿರಿ. ಅತಿ ಹೆಚ್ಚು ಸಂಭಾವನೆ ಎಷ್ಟು ಪಡೆದಿದ್ದಿರಿ. ಛಪ್ಪಿ ಪರಿಚಯ ಹೇಗೆ, ರವಿಶಂಕರ್ ಭೇಟಿ ಯಾವಾಗ. […]

ಸಿನಿಮಾ

ನಟಿ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಜಾಮೀನು ಅರ್ಜಿ ವಜಾ

ಬೆಂಗಳೂರು prajakiran.com : ಡ್ರಗ್ಸ್ ದಂಧೆಯ ಜಾಲದಲ್ಲಿ ಸಿಲುಕಿ ಬೆಂಗಳೂರಿನ ಕೇಂದ್ರ ಕಾರಾಗೃಹ (ಪರಪ್ಪನ ಅಗ್ರಹಾರ )ಪಾಲಾದ ಸ್ಯಾಂಡಲ್ ವುಡ್  ನಟಿಯರಾದ ರಾಗಿಣಿ ದ್ವಿವೇದಿ ಹಾಗೂ  ಸಂಜನಾ ಗರ್ಲಾನಿ ಜಾಮೀನು ಅರ್ಜಿ ವಜಾ ಮಾಡಿ ಎನ್ ಡಿ ಪಿ ಎಸ್  ವಿಶೇಷ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಬೆಂಗಳೂರಿನ ಎನ್ ಡಿ ಪಿ ಎಸ್  ವಿಶೇಷ ಕೋರ್ಟ್ ನ್ಯಾಯಾಧೀಶರಾದ ಜಿ.ಎಂ. ಶೀನಪ್ಪಅವರು ಈ ತೀರ್ಪು ಹೊರಡಿಸಿದ್ದಾರೆ. ಸಿಸಿಬಿ ಅಧಿಕಾರಿಗಳು ಸಲ್ಲಿಸಿದ ಮಹತ್ವದ ಸಾಕ್ಷ್ಯಗಳು, ಎಫ್ ಎಸ್ ಎಲ್ […]

ಸಿನಿಮಾ

ಗಾನಗಂಧರ್ವ ಎಸ್ ಪಿ ಬಾಲಸುಬ್ರಮಣ್ಯ ಇನ್ನು ನೆನಪು ಮಾತ್ರ

ಚೈನ್ನೈ  prajakiran.com : ಹಿರಿಯ ಬಹುಭಾಷಾ ನಟ, ನಿರ್ಮಾಪಕ, ಖ್ಯಾತ ಹಿನ್ನಲೆ ಗಾಯಕ ಗಾನಗಂಧರ್ವ ಎಸ್ ಪಿ ಬಾಲಸುಬ್ರಮಣ್ಯ (74) ಅವರು ಸೆ. 25ರಂದು ಶುಕ್ರವಾರ ಮಧ್ಯಾಹ್ನ 1 ಗಂಟೆ ನಾಲ್ಕು ನಿಮಿಷಕ್ಕೆ ವಿಧಿವಶರಾದರು. 10ಕ್ಕೂ ಹೆಚ್ಚು ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡು ಹಾಡಿರುವ ಎಸ್ ಪಿ ಬಿ ನಟನೆ, ನಿರ್ಮಾಣ, ಸಂಯೋಜನೆಯಲ್ಲಿ ಪಳಗಿದ್ದರು. ಹಿಂದಿಯಲ್ಲಿ ಒಂದೇ ದಿನ 16 ಚಿತ್ರಗಳಿಗೆ ಹಾಡು ಹಾಡುವ ಮೂಲಕ ದಾಖಲೆ ಬರೆದಿದ್ದರು. ಅವರು ಕಳೆದ ಆ. 5ರಂದು ಚೈನ್ನೈ […]

ಸಿನಿಮಾ

ನಟ ಲೂಸ್ ಮಾದ, ಗಟ್ಟಿಮೇಳ ನಟ ಅಭಿಷೇಕ್ ದಾಸ್, ಬ್ರಹ್ಮಗಂಟು ನಟಿ ಗೀತಾ ಭಾರತಿ ಭಟ್ ವಿಚಾರಣೆ ನಡೆಸಿದ ಐ ಎಸ್ ಡಿ

ಬೆಂಗಳೂರು prajakiran.com : ಡ್ರಗ್ಸ್ ಜಾಲದ ನಂಟು ಹೊಂದಿದ ಆರೋಪಿಗಳ ಜೊತೆಗೆ ದೂರವಾಣಿ ಸಂಪರ್ಕ ಹೊಂದಿರುವ ಕುರಿತು ಸ್ಯಾಂಡಲ್ ವುಡ್ ನಟ ಲೂಸ್ ಮಾದ ಖ್ಯಾತಿಯ ಯೋಗಿಯನ್ನು ಐ ಎಸ್ ಡಿ ಅಧಿಕಾರಿಗಳು ವಿಚಾರಣೆ ನಡೆಸಿದರು. ನಟ ಯೋಗಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ನಾನು  ಯಾವುದೇ ತಪ್ಪು ಮಾಡಿಲ್ಲ. ಭಯ ಪಡುವಂತಹದ್ದು ಏನೂ ಇಲ್ಲ. ರಾಗಿಣಿ ಸಂಬಂಧ ಪೋನ್ ಕಾಲ್ ಇಲ್ಲ. ಪೋನ್ ಕಾಲ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಕಿರುತೆರೆ ಗಟ್ಟಿಮೇಳ ನಟ ಅಭಿಷೇಕ್ […]

ಸಿನಿಮಾ

ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಜಾಮೀನು ಅರ್ಜಿ ಸೆ. 24ಕ್ಕೆ ಮುಂದೂಡಿಕೆ

 ಬೆಂಗಳೂರು prajakiran.com : ಡ್ರಗ್ಸ್ ಜಾಲದಲ್ಲಿ ಸಿಲುಕಿ ಬೆಂಗಳೂರಿನ ಕೇಂದ್ರ ಕಾರಾಗೃಹ (ಪರಪ್ಪನಅಗ್ರಹಾರ) ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಜಾಮೀನು ಅರ್ಜಿ ವಿಚಾರಣೆಯನ್ನು ಸೆ. 24ಕ್ಕೆ ಮುಂದೂಡಿಕೆಯಾಗಿದೆ. ವಾದ ಪ್ರತಿವಾದ ಆಲಿಸಿದ ಬೆಂಗಳೂರಿನ ಎನ್ ಡಿ ಪಿ ಎಸ್ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಸಿಸಿಬಿ ಪರ ವಾದ ಮಂಡಿಸಿದ ಸರಕಾರಿ ಅಭಿಯೋಜಕರು, ನಟಿ ರಾಗಿಣಿ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದರು. ಅಲ್ಲದೆ, ಅವರು ಪ್ರಭಾವಿಯಾಗಿದ್ದು, ಶ್ರೀಮಂತರು, ಉದ್ಯಮಿಗಳು ಹಾಗೂ ರಾಜಕಾರಣಿಗಳ ಜೊತೆಗೆ ಸಂಪರ್ಕದಲ್ಲಿದ್ದಾರೆ. ಈ […]