ಬೆಂಗಳೂರು prajakiran.com : ಡ್ರಗ್ಸ್ ದಂಧೆಯ ಜಾಲದಲ್ಲಿ ಸಿಲುಕಿ ಬೆಂಗಳೂರಿನ ಕೇಂದ್ರ ಕಾರಾಗೃಹ (ಪರಪ್ಪನ ಅಗ್ರಹಾರ )ಪಾಲಾದ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗರ್ಲಾನಿ ಜಾಮೀನು ಅರ್ಜಿ ವಜಾ ಮಾಡಿ ಎನ್ ಡಿ ಪಿ ಎಸ್ ವಿಶೇಷ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಬೆಂಗಳೂರಿನ ಎನ್ ಡಿ ಪಿ ಎಸ್ ವಿಶೇಷ ಕೋರ್ಟ್ ನ್ಯಾಯಾಧೀಶರಾದ ಜಿ.ಎಂ. ಶೀನಪ್ಪಅವರು ಈ ತೀರ್ಪು ಹೊರಡಿಸಿದ್ದಾರೆ.
ಸಿಸಿಬಿ ಅಧಿಕಾರಿಗಳು ಸಲ್ಲಿಸಿದ ಮಹತ್ವದ ಸಾಕ್ಷ್ಯಗಳು,
ಎಫ್ ಎಸ್ ಎಲ್ ಟೆಸ್ಟ್ , ಮೋಬೈಲ್ ಪೋನ್ ಸಾಕ್ಷ್ಯ, ವಾಟ್ಸಪ್ ದಾಖಲೆ ಸಂಗ್ರಹಿಸಿತ್ತು. ಸಿಸಿಬಿ ಸಲ್ಲಿಸಿದ್ದ ಎಲ್ಲಾ ದಾಖಲೆ ಪರಿಶೀಲಿಸಿ ಜಾಮೀನು ನಿರಾಕರಿಸಿದೆ.
ಇದೇ ವೇಳೆ ಡ್ರಗ್ಸ್ ದಂಧೆಯ ಇನ್ನೊಬ್ಬ ಆರೋಪಿ ಹಾಗೂ ರಾಗಿಣಿ ಮೊದಲ ಬಾಯ್ ಫ್ರೆಂಡ್ ಶಿವಪ್ರಕಾಶ ಛಪ್ಪಿ ಈವರೆಗೆ ಸಿಸಿಬಿ ಕೈ ಗೆ ಸಿಕ್ಕಿಲ್ಲ. ಆದರೆ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯ ಮೆಟ್ಟಿಲು ಹತ್ತಿದ್ದ.
ಆತನ ಮೇಲೆ ಡ್ರಗ್ಸ್ ಪೆಡ್ಲರ್ಸ್ ಆರೋಪಗಳಿವೆ. ಆತನ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಅಲ್ಲದೆ, ನಟಿ ಸಂಜನಾ ರಾಖಿ ಬ್ರದರ್ ರಾಹುಲ್ ಹಾಗೂ ಆರೋಪಿ ವಿನಯಕುಮಾರ್ ಗೂ ಜಾಮೀನು ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಜಾರಿ ನಿರ್ದೇಶನಾಲಯ (ಇಡಿ )ಅಧಿಕಾರಿಗಳ ತಂಡ ಕೂಡ ಜೈಲಿನಲ್ಲಿಯೇ ವಿಚಾರಣೆ ನಡೆಸುತ್ತಿದೆ.
ಜಾಮೀನು ನಿರಾಕರಿಸಿದ ಮಾಹಿತಿ ಅರಿತುಇಬ್ಬರು ನಟಿಮಣಿಯರು ಬಿಕ್ಕಿ ಬಿಕ್ಕಿ ಅಂತಿದ್ದಾರೆ ಎಂದು ಮಾಹಿತಿ ಹೊರಬಿದ್ದಿದೆ. ಇಬ್ಬರಿಗೂ ಜೈಲೇಗತಿ ಎನ್ನುವಂತಾಗಿದೆ.
ಕರೋನಾ ಹಿನ್ನಲೆಯಲ್ಲಿ ಮೊದಲ 14 ದಿನಗಳ ಕಾಲ ಕ್ವಾರಂಟಿನ್ ಸೆಲ್ ನಲ್ಲಿ ಇದ್ದರು. ಇಬ್ಬರು ಇದೀಗ ಸಾಮಾನ್ಯ ಸೆಲ್ ಗೆ ಸ್ಥಳಾಂತರಗೊಳ್ಳಲಿದ್ದಾರೆ.