prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
ರಾಜ್ಯ

ಬಿಜೆಪಿಯಿಂದ ಉಚ್ಛಾಟನೆ ತಾತ್ಕಲಿಕ ಎಂದ ಕೆ.ಎಸ್. ಈಶ್ವರಪ್ಪ

*ಧರ್ಮಕ್ಕೆ ಜಯ ಅಧರ್ಮಕ್ಕೆ ಸೋಲು ಖಚಿತ* *ಹಿಂದುತ್ವವನ್ನು ಹತ್ತಿಕ್ಕಲು ಬಿಡುವುದಿಲ್ಲ* *ಯಡಿಯೂರಪ್ಪ ಹಾಗೂ ಮಕ್ಕಳ ವಿರುದ್ಧ ಮತ್ತೆ ಕಿಡಿ* ಶಿವಮೊಗ್ಗ ಪ್ರಜಾಕಿರಣ. ಕಾಮ್ : ಬಿಜೆಪಿಯ ಉಚ್ಚಾಟನೆ ಕೇವಲ ತಾತ್ಕಾಲಿಕ ಎಂದು ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ಇದು ಲೋಕಸಭಾ ಚುನಾವಣೆ ಮುಗಿಯುವರೆಗೆ ಮಾತ್ರ. ನಾನು ಐದು ಬಾರಿ ಕಮಲದ ಚಿಹ್ನೆ ಮೇಲೆ ಗೆದ್ದಿದ್ದೇನೆ. ಈ ಬಾರಿ ರೈತನ ಚಿಹ್ನೆ ಮೇಲೆ ಗೆದ್ದು ಬರ್ತಿನಿ ಎಂದಿದ್ದಾರೆ. ಬಿಜೆಪಿಯ ಶೇಕಡಾ 60ರಷ್ಟು ಕಾರ್ಯಕರ್ತರು ನನ್ನ ಜೊತೆಗೆ ಬಹಿರಂಗವಾಗಿ ಗುರುತಿಸಿಕೊಂಡಿದ್ದಾರೆ. ಇನ್ನು […]

ರಾಜ್ಯ

ಒಕ್ಕಲಿಗ ಸಮುದಾಯದ ನಾಯಕರನ್ನು ಮುಗಿಸಿದ್ದೇ ದೇವೇಗೌಡರು: ಸಿ.ಎಂ.

*ಶ್ರೇಯಸ್ ಪಟೇಲ್ ರನ್ನು ಗೆಲ್ಲಿಸಿಕೊಂಡು ಬನ್ನಿ: ಶಿವಲಿಂಗೇಗೌಡರನ್ನು ಮಂತ್ರಿ ಮಾಡುವ ಜವಾಬ್ದಾರಿ ನನಗೆ ಬಿಡಿ: ಸಿ.ಎಂ.ಸಿದ್ದರಾಮಯ್ಯ ಘೋಷಣೆ* ಅರಸೀಕೆರೆ ಪ್ರಜಾಕಿರಣ.ಕಾಮ್ ಏ 22: ಶ್ರೇಯಸ್ ಪಟೇಲ್ ಅವರನ್ನು ಹಾಸನ ಲೋಕಸಭಾ ಕ್ಷೇತ್ರದಿಂದ ಗೆಲ್ಲಿಸಿಕೊಂಡು ಬನ್ನಿ. ಶಾಸಕ ಶಿವಲಿಂಗೇಗೌಡರನ್ನು ಮಂತ್ರಿ ಮಾಡುವ ಜವಾಬ್ದಾರಿ ನನಗೆ ಬಿಡಿ ಎಂದು ಮುಖ್ಯಮಂತ್ರಿ ಸಿ.ಎಂ.ಸಿದ್ದರಾಮಯ್ಯ ಘೋಷಿಸಿದರು. ಶ್ರೇಯಸ್ ಪಟೇಲ್ ಗೆಲುವಿಗೆ ಅರಸೀಕೆರೆಯಲ್ಲಿ ನಡೆಸಿದ ಬೃಹತ್ ರೋಡ್ ಶೋ ವೇಳೆ ಈ ಘೋಷಣೆ ಮಾಡಿದರು. ದೇವೇಗೌಡರು ತಮ್ಮ ಕುಟುಂಬದ ರಾಜಕೀಯ ಹಿತಾಸಕ್ತಿಗಾಗಿ ಮೋದಿಯವರನ್ನು ಹಿಗ್ಗಾ […]

ರಾಜ್ಯ

ನೇಹಾ ಹಿರೇಮಠ್ ಕೊಲೆ ಪ್ರಕರಣ: ಸಿಒಡಿ ತನಿಖೆಗೆ

*ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ:* *ಮುಖ್ಯಮಂತ್ರಿ ಸಿದ್ದರಾಮಯ್ಯ* ಶಿವಮೊಗ್ಗ  ಪ್ರಜಾಕಿರಣ. ಕಾಮ್ ಏ-22: ಹುಬ್ಬಳ್ಳಿಯ ನೇಹಾ ಹಿರೇಮಠ್ ಕೊಲೆ ಪ್ರಕರಣವನ್ನು ಸಿ.ಒ.ಡಿ ತನಿಖೆಗೆ ವಹಿಸಲಾಗುವುದು. ವಿಶೇಷ ನ್ಯಾಯಾಲಯ ಸ್ಥಾಪಿಸಿ ಕಾಲಮಿತಿಯಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಶಿವಮೊಗ್ಗ ವಿಮಾನನಿಲ್ದಾಣದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿಗಳು ಹುಬ್ಬಳ್ಳಿಯಲ್ಲಿ ನೇಹಾ ಮನೆಗೆ ಭೇಟಿ ನೀಡಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ನಮ್ಮ ಸಚಿವರು, ಕಾರ್ಯಕರ್ತರು ಹಾಗೂ ಸಚಿವ ಹೆಚ್. ಕೆ.ಪಾಟೀಲ್ ಭೇಟಿ ನೀಡಿದ್ದಾರೆ. […]

ಅಂತಾರಾಷ್ಟ್ರೀಯ

ಸಪ್ತಸಾಗರದಾಚೆ ಸಡಗರ ಸಂಭ್ರಮದ ಯುಗಾದಿ ಹಬ್ಬ

ಆಸ್ಟಿನ್ ಪ್ರಜಾಕಿರಣ.ಕಾಮ್ : ಭಾರತ ಬಿಟ್ಟು ಒಂಬತ್ತು ಸಾವಿರ ಮೈಲಿ ದೂರ ಇದ್ದರೂ ಕನ್ನಡಿಗರು ತಮ್ಮ ಸ್ವಂತಿಕೆಯನ್ನು ಮರೆಯದೆ ಯುಗಾದಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿ ಸಾರ್ಥಕತೆ ಮರೆದಿದ್ದಾರೆ. ಆಸ್ಟಿನ್ ಕನ್ನಡ ಸಂಘದ ವತಿಯಿಂದ ೨೦೨೪ರ ಯುಗಾದಿ ಸಂಭ್ರಮವನ್ನು ಆಸ್ಟಿನ್ ಟೆಕ್ಸಾಸ್ ನಗರದ ಎಲ್ಲಾ ಕನ್ನಡಿಗರು ಒಂದೆಡೆ ಸೇರಿಕೊಂಡು ಬಹಳೇ ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸಿದರು. ಚಿಕ್ಕಮಕ್ಕಳಿಂದ ಡಾನ್ಸ್, ಫ್ಯಾಷನ್ ಶೋ ಹಾಗೂ ವಿಶ್ವ ವಿಖ್ಯಾತ ಕೊಳಲು ವಾದಕ ಧಾರವಾಡದ ಪ್ರವೀಣ್ ಗೊಡಕಿಂಡಿ ಅವರಿಂದ ಸುಶ್ರಾವ್ಯ ಕೊಳಲು […]

ಅಂತಾರಾಷ್ಟ್ರೀಯ

ಧಾರವಾಡದ ಮನೆ ನಂ. 303 ರಲ್ಲಿ 18 ಕೋಟಿ ನಗದು ಪತ್ತೆ

*ಧಾರವಾಡದ ಆರ್ನ್ಯ ಅರ್ಪಾಂಟ್ ಮೆಂಟ್ ಮನೆ ನಂ 303 ರಲ್ಲಿ ಪತ್ತೆ* *ಮದ್ಯ ಸಂಗ್ರಹ ಮಾಹಿತಿ ಮೇರೆಗೆ ದಾಳಿ* *ಸಿಕ್ಕಿದ್ದು ಮಾತ್ರ ಕೋಟಿ ಕೋಟಿ ಹಣ* *ಅಷ್ಟೋಂದು ಹಣ ಕಂಡು ಕಕ್ಕಾಬಿಕ್ಕಿಯಾದ ಅಧಿಕಾರಿಗಳು* *ಸ್ಥಳಕ್ಕೆ ಐಟಿ, ಬ್ಯಾಂಕ್ ಅಧಿಕಾರಿಳು ದೌಡು* ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ನಾರಾಯಣಪೂರದಲ್ಲಿರುವ ಆರ್ನ್ಯ ಅರ್ಪಾಂಟ್ ಮೆಂಟ್ ಮನೆ ನಂ 303 ರ ಮೇಲೆ ಚುನಾವಣಾ ಕ್ಷಿಪ್ರ ಕಾರ್ಯಪಡೆಯಿಂದ ದಾಳಿ ನಡೆದಿದೆ. ಮದ್ಯ ಸಂಗ್ರಹ ಇದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. […]

ಸಿನಿಮಾ

ಹಿರಿಯ ಹಾಸ್ಯ ನಟ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ…!

ಹಿರಿಯ ಹಾಸ್ಯ ನಟ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ…! ಬೆಂಗಳೂರು ಪ್ರಜಾಕಿರಣ.ಕಾಮ್ : ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ, ನಿರ್ಮಾಪಕ ಹಾಗೂ ನಿರ್ದೇಶಕರಾಗಿದ್ದ ದ್ವಾರಕೀಶ್‌ (81) ಇಹಲೋಕ ತ್ಯಜಿಸಿದರು. ಅವರು ಕಳೆದ ಹಲವು ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ಮಂಗಳವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ನಟ ದ್ವಾರಕೀಶ್ 1942ರ ಆಗಸ್ಟ್ 19ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದ್ದರು. 1963ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ದ್ವಾರಕೀಶ್, 1964ರಲ್ಲಿ ವೀರ ಸಂಕಲ್ಪ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. […]

ಅಂತಾರಾಷ್ಟ್ರೀಯ

ಕೇಂದ್ರ ಸಚಿವರಾದರೂ ಪ್ರಹ್ಲಾದ ಜೋಶಿ ಬಳಿ ಸ್ವಂತ ವಾಹನ ಇಲ್ಲ…!

ಧಾರವಾಡ ಪ್ರಜಾಕಿರಣ.ಕಾಮ್ : ನಾಲ್ಕು ಬಾರಿ ಸಂಸದರಾಗಿ, ಕೇಂದ್ರ ಸಚಿವರಾದರೂ ಪ್ರಹ್ಲಾದ ಜೋಶಿ ಅವರ ಬಳಿ ಒಂದೇ ಒಂದು ಸ್ವಂತ ವಾಹನವಿಲ್ಲ. ಹಾಗಂತ ಅವರು ತಮ್ಮ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ. ನಾಮಪತ್ರದ ಜೊತೆಗೆ ಜೋಶಿ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ಮೌಲ್ಯದ ವಿವರಣೆ ನೀಡಿದ್ದಾರೆ. ಜೋಶಿ ಕುಟುಂಬದವರ ಒಟ್ಟು ಆಸ್ತಿ 21,09,60,953 ಆಗಿದೆ. ಕಳೆದ ಐದು ವರ್ಷದ ಅವಧಿಯಲ್ಲಿ ಈ ಆಸ್ತಿ ಮೌಲ್ಯ 7 ಕೋಟಿ ಹೆಚ್ಚಳವಾಗಿದೆ. 2019ರಲ್ಲಿ ಜೋಶಿ ಕುಟುಂಬದ ಆಸ್ತಿ 14.71 ಕೋಟಿ ಇತ್ತು. […]

ರಾಜ್ಯ

ಕೆ ಐ ಎ ಡಿ ಬಿ ಬಹು ಕೋಟಿ ಹಗರಣ : ಪ್ರಮುಖ ಆರೋಪಿ ಅಶ್ಫಕ್ ದುಂಡಸಿ ಜಾಮೀನಿನ ಅರ್ಜಿ ವಜಾ

*ಕೆ ಐ ಎ ಡಿ ಬಿ ಬಹು ಕೋಟಿ ಹಗರಣ : ಪ್ರಮುಖ ಆರೋಪಿ ಅಶ್ಫಕ್ ದುಂಡಸಿ ಜಾಮೀನಿನ ಅರ್ಜಿ ವಜಾ* *ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ* *ವಿ.ಡಿ. ಸಜ್ಜನ ಸೇರಿದಂತೆ ಹಲವರಿಗೆ ಜೈಲೂಟವೇ ಗತಿ* ಧಾರವಾಡ ಪ್ರಜಾಕಿರಣ.ಕಾಮ್ : ರೈತರ ಹೆಸರಿನಲ್ಲಿ ನಕಲಿ‌ ದಾಖಲೆ ಸೃಷ್ಟಿಸಿ ಡಬಲ್ ಪೇಮೆಂಟ್ ಪಡೆಯುವ ಮೂಲಕ ಸರಕಾರದ ಖಜಾನೆಗೆ ಕೋಟ್ಯಾಂತರ ರೂಪಾಯಿ ನಷ್ಟವೆಸಗಿದ ಆರೋಪದಲ್ಲಿ ಸಿಐಡಿ ಯಿಂದ ಬಂಧನಕ್ಕೆ ಒಳಗಾಗಿ ಧಾರವಾಡ ಕೇಂದ್ರ ಕಾರಾಗೃಹ ಸೇರಿರುವ ಪ್ರಮುಖ ಆರೋಪಿ […]

ಅಂತಾರಾಷ್ಟ್ರೀಯ

ಧಾರವಾಡ : ಬೃಹತ್ ಶಕ್ತಿ ಪ್ರದರ್ಶನದ ಮೂಲಕ ನಾಮಪತ್ರ ಸಲ್ಲಿಸಿದ ಪ್ರಹ್ಲಾದ ಜೋಶಿ

* ಬಿಎಸ್‌ವೈ ಸೇರಿ ಹಲವು ನಾಯಕರ ಸಾಥ್* *ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳ ಸಾಥ್* *ಧಾರವಾಡ ಶಿವಾಜಿ ವೃತ್ತದಿಂದ ಡಿಸಿ ಕಚೇರಿವರೆಗೆ ಬೃಹತ್ ರೋಡ್ ಶೋ* *ಐದನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದ ಪ್ರಹ್ಲಾದ ಜೋಶಿ* ಧಾರವಾಡ ಪ್ರಜಾಕಿರಣ.ಕಾಮ್ : ಹಾಲಿ ಕೇಂದ್ರ ಸಚಿವರೂ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರು ಸೋಮವಾರ ಸಾವಿರಾರು ಅಭಿಮಾನಿಗಳ ಹಾಗೂ ಕಾರ್ಯರ್ತರ ಬೃಹತ್ ರೋಡ್ ಶೋ ಮುಖಾಂತರ ಐದನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗಾಗಿ ನಾಮಪತ್ರ ಸಲ್ಲಿಸಿದರು. […]

ಅಂತಾರಾಷ್ಟ್ರೀಯ

ಕರ್ನಾಟಕದಿಂದ ನೂರಾರು ಕೋಟಿ ಬ್ಲ್ಯಾಕ್ ಮನಿ ದೇಶದೆಲ್ಲಡೆ ಹೋಗುತ್ತಿದೆ : ಮೋದಿ

ಬೆಂಗಳೂರು ಪ್ರಜಾಕಿರಣ.ಕಾಮ್ : ರಾಜ್ಯದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮಿತಿ‌ಮೀರಿದೆ. ಕರ್ನಾಟಕದಿಂದ ನೂರಾರು ಕೋಟಿ ಬ್ಲ್ಯಾಕ್ ಮನಿ ದೇಶದೆಲ್ಲಡೆ ಹೋಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು. ಅವರು ಮೈಸೂರಿನ ‌ಮಹಾರಾಜ್ ಕಾಲೇಜಿನ ಆವರಣದಲ್ಲಿ ಮೈಸೂರು, ಹಾಸನ, ಮಂಡ್ಯದ ಬಿಜೆಪಿ ಜೆಡಿಎಸ್ ಮೃತ್ರಿ ಅಭ್ಯರ್ಥಿ ಗಳ ಪರ ನಡೆದ ಬೃಹತ್  ಸಮಾವೇಶದಲ್ಲಿ ಭಾಷಣ ಮಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ನ ಮಿತಿ ಮೀರಿದ ಭ್ರಷ್ಟಾಚಾರದಿಂದ ಖಜಾನೆ ಸಂಪೂರ್ಣ ಖಾಲಿಯಾಗಿದ್ದು, ಅಭಿವೃದ್ಧಿ ಯೋಜನೆಗಳಿಗೆ ಅನುದಾನವಿಲ್ಲದಾಗಿದೆ ಎಂದು ಕಿಡಿಕಾರಿದರು. ವಿದ್ಯಾರ್ಥಿಗಳ ಸ್ಕಾಲರ್ […]