*ಧರ್ಮಕ್ಕೆ ಜಯ ಅಧರ್ಮಕ್ಕೆ ಸೋಲು ಖಚಿತ*
*ಹಿಂದುತ್ವವನ್ನು ಹತ್ತಿಕ್ಕಲು ಬಿಡುವುದಿಲ್ಲ*
*ಯಡಿಯೂರಪ್ಪ ಹಾಗೂ ಮಕ್ಕಳ ವಿರುದ್ಧ ಮತ್ತೆ ಕಿಡಿ*
ಶಿವಮೊಗ್ಗ ಪ್ರಜಾಕಿರಣ. ಕಾಮ್ : ಬಿಜೆಪಿಯ ಉಚ್ಚಾಟನೆ ಕೇವಲ ತಾತ್ಕಾಲಿಕ ಎಂದು ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
ಇದು ಲೋಕಸಭಾ ಚುನಾವಣೆ ಮುಗಿಯುವರೆಗೆ ಮಾತ್ರ. ನಾನು ಐದು ಬಾರಿ ಕಮಲದ ಚಿಹ್ನೆ ಮೇಲೆ ಗೆದ್ದಿದ್ದೇನೆ. ಈ ಬಾರಿ ರೈತನ ಚಿಹ್ನೆ ಮೇಲೆ ಗೆದ್ದು ಬರ್ತಿನಿ ಎಂದಿದ್ದಾರೆ.
ಬಿಜೆಪಿಯ ಶೇಕಡಾ 60ರಷ್ಟು ಕಾರ್ಯಕರ್ತರು ನನ್ನ ಜೊತೆಗೆ ಬಹಿರಂಗವಾಗಿ ಗುರುತಿಸಿಕೊಂಡಿದ್ದಾರೆ.
ಇನ್ನು ಕೆಲವರು ಅಲ್ಲಿಯೇ ಇದ್ದು ಬೆಂಬಲ ಕೊಡ್ತಿವಿ ಎಂದು ಹೇಳಿದ್ದಾರೆ.
ಇದಲ್ಲದೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಲ್ಲ. ನಾವು ನಿಮಗೆ ಬೆಂಬಲ ಕೊಡ್ತಿವಿ ಅಂತ ಹೇಳಿದ್ದಾರೆ.
ಜೆಡಿಎಸ್ ಕಾರ್ಯಕರ್ತರು ಕೂಡ ನನ್ನೊಂದಿಗೆ ಇದ್ದಾರೆ. ಹೀಗಾಗಿ ಖಂಡಿತ ಧರ್ಮಕ್ಕೆ ಜಯ ಸಿಕ್ಕೆ ಸಿಗುತ್ತದೆ. ಅಧರ್ಮಕ್ಕೆ ಸೋಲು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದುತ್ವವನ್ನು ಹತ್ತಿಕ್ಕಲು ಸಂಘ ಪರಿವಾರದ ಅನೇಕ ನಾಯಕರು, ಹಿಂದುತ್ವವಾದಿಗಳು ಎಂದಿಗೂ ಬಿಡುವುದಿಲ್ಲ ಎಂದು ಹೇಳಿದರು.
ಯಡಿಯೂರಪ್ಪ ಹಾಗೂ ಮಕ್ಕಳ ಆಟ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುವುದಿಲ್ಲ ಎಂದು
ಕಿಡಿ ಕಾರಿದ್ದಾರೆ.