ಧಾರವಾಡ prajakiran.com : ಮುಂಗಾರು ಆರಂಭಕ್ಕೆ ಮುನ್ನವೇ ಧಾರವಾಡ ಜಿಲ್ಲೆಯ ರೈತರಿಗೆ ಕಳಪೆ ಬೀಜದ ಕಾಟ ಶುರುವಾಗಿದೆ.
ನಿನ್ನೆ ಮೊನ್ನೆಯವರೆಗೂ ಬಿತ್ತನೆ ಬೀಜಕ್ಕಾಗಿ ಹರಸಾಹಸ ಮಾಡತಾ ಇದ್ದ ರೈತರು ರೈತರು ಅದೇನ್ ಪಾಪಾ ಮಾಡಿದ್ದಾರೋ ಗೊತ್ತಿಲ್ಲ.
ಇದೀಗ ಹೇಗೋ ಪರದಾಡಿ ತೆಗೆದುಕೊಂಡು ಹೋಗಿ ಬಿತ್ತನೆ ಮಾಡಿರೋ ಕೆಲವೊಂದು ಬೀಜಗಳು ನೆಲ ಬಿಟ್ಟು ಮೇಲೇಳುತ್ತಲೇ ಇಲ್ಲ. ಕಳಪೆ ಬೀಜದಿಂದ ಧಾರವಾಡ ರೈತರು ಕಂಗಾಲಾಗಿ ಹೋಗಿದ್ದಾರೆ.
ಜಮೀನಿನಲ್ಲಿ ಬಿತ್ತಿದ ಬೀಜ ಎಲ್ಹೋದು ಅಂತಾ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಘಟನೆ ಧಾರವಾಡ ಜಿಲ್ಲೆಯ ಲಕಮಾಪುರ ಗ್ರಾಮದ ರೈತನ ಜಮೀನಿನಲ್ಲಿಕಂಡು ಬಂದಿದೆ.
ಲಕಮಾಪುರ ಗ್ರಾಮದ ಬಸವರಾಜ ಎಂಬ ರೈತ ತನ್ನ ಗ್ರಾಮದ ಪಕ್ಕದಿಂದಲೇ ಅಧಿಕೃತ ಸೊಸೈಟಿಯಿಂದಲೇ ಸೋಯಾ ಅವರೆ ಬೀಜ ತಂದು ಬಿತ್ತನೆ ಮಾಡಿದ್ರು.
ಎರಡು ಎಕರೆಯಲ್ಲಿ ಅಲ್ಲೊಂದು ಇಲ್ಲೊಂದು ಮೊಳಕೆಯೊಡೆದಿದ್ದು ಬಿಟ್ರೆ ಇಡೀ ಜಮೀನಿಗೆ ಜಮೀನೇ ಖಾಲಿಯಾಗಿ ಹೋಗಿದ್ದು, ಬಿತ್ತಿದ ಕಾಳು ಮೇಲೆದ್ದಿಲ್ಲ ಎಂದು ಗೋಳು ತೋಡಿಕೊಂಡಿದ್ದಾನೆ.
ಧಾರವಾಡ ಜಿಲ್ಲೆಯಲ್ಲಿ ಸೋಯಾ, ಅವರೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಸಾಕಷ್ಟು ರೈತರು ಈಗಾಗಲೇ ಕೃಷಿ ಪತ್ತಿನ ಸಹಕಾರ ಸಂಘದಿಂದ ಹಾಗೂ ರೈತ ಸಂಪರ್ಕ ಕೇಂದ್ರಗಳಿಂದ ಬಿತ್ತನೆ ಬೀಜ ಪಡೆದಿದ್ದಾರೆ.
ಅದರಲ್ಲಿ ಕಳಪೆ ಗುಣಮಟ್ಟ ಅಂತಾ ಕಂಡು ಬಂದಿದ್ದು, ಹೀಗೆ ಒಬ್ಬೊಬ್ಬರ ರೈತರ ಹೊಲದಲ್ಲಿ ಬಿತ್ತಿದ್ದು ಮೇಲೇದ್ದಿಲ್ಲ ಅಂತಾ ತಿಳಿತಾ ಇದ್ದಂತೆಯೇ ಹಾಗೆಯೇ ಬೀಜಗಳನ್ನು ಇಟ್ಟುಕೊಂಡು ಕುಳಿತಿದ್ದಾರೆ ನಮ್ಮಅನ್ನದಾತರು.
ಈ ಬಗ್ಗೆ ಕಂಪನಿಯವರಾಗಲಿ, ಕೃಷಿ ಇಲಾಖೆಯವರಾಗಲಿ ಬಂದು ನೋಡಿಲ್ಲ. ಸಾಲ ಮಾಡಿ ಬಿತ್ತನೆಗೆ ತಯಾರಿ ಮಾಡಿಕೊಂಡಿದ್ದ ರೈತರು ಈಗ ಅಕ್ಷರಶಃ ಕಂಗಾಲಾಗಿ ಹೋಗಿದ್ದೇವೆ ಎಂದು ಮಂಜುನಾಥ, ಬೀಜ ಇಟ್ಟುಕೊಂಡ ರೈತ ಪ್ರಜಾಕಿರಣ.ಕಾಮ್ ಗೆ ತಿಳಿಸಿದರು.
ಒಟ್ಟಾರೆಯಾಗಿ ರೈತನಿಗೆ ಒಂದು ಸಿಕ್ಕರೇ ಮತ್ತೊಂದು ಸಿಗೋದಿಲ್ಲ ಅನ್ನೋದು ಇಲ್ಲಿ ಸಾಬೀತಾಗಿ ಹೋಗಿದೆ. ಈ ಸಲ ಒಳ್ಳೆ ಮುಂಗಾರು ಗೋಚರಿಸಿದ್ದು, ಬಿತ್ತನೆಗೆ ಹಂಗಾಮು ಸಹ ಇದೇ.
ಆದ್ರೆ ಇದೇ ಸಂದರ್ಭದಲ್ಲಿ ಕಳಪೆ ಬೀಜ ರೈತರಿಗೆ ಕಡುಕಷ್ಟ ತಂದಿಟ್ಟಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಲಕ್ಷ್ಯ ವಹಿಸುತ್ತಾರಾ? ಕಾದು ನೋಡಬೇಕಿದೆ.