ಬೆಳಗಾವಿ prajakiran.com : ರಾಜ್ಯದ ಬಿಜೆಪಿ ಸರ್ಕಾರ ಆರ್ಥಿಕ ದಿವಾಳಿ ಆಗಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಅವರ ಕಣ್ಣು ಹಳದಿ ಅದಾವ್.. ಅವರು ಹಾಗೇ ನೋಡಲಿ ಬಿಡಿ. ಸಿದ್ದರಾಮಯ್ಯನವರು ಮಹಾನ್ ನಾಯಕರು. ಅವರ ಬಗ್ಗೆ ನನಗೆ ಗೌರವವಿದೆ ಎಂದು ಛೇಡಿಸಿದರು.
ಇದೇ ವೇಳೆ ಬಿಜೆಪಿ ಶಾಸಕರು ಭೇಟಿ ಬಗ್ಗೆ ಅವರು ಏನು ಹೇಳಿದ್ದಾರೆ ನನಗೆ ಗೊತ್ತಿಲ್ಲ ಎಂದು ನುಣಚಿಕೊಂಡರು.
ಕೋವಿಡ್ ಮತ್ತು ಪ್ರವಾಹ ಕುರಿತ ಅಧಿಕಾರಿಗಳ ಸಭೆ ಬಳಿಕ ಈ ಹೇಳಿಕೆ ನೀಡಿದರು. ಈ ಮುಂಚೆ ಜಗದೀಶ್ ಶೆಟ್ಟರ್ ಜಿಲ್ಲಾ ಉಸ್ತುವಾರಿ ಇದ್ದಾಗ ನಾನೇ ಉಸ್ತುವಾರಿ ಇದ್ದೆ. ಈಗ ನಾನಾಗಿರುವುದು ಏನು ಅಷ್ಟೊಂದು ಬದಲಾವಣೆ ಆಗಿಲ್ಲ.
ನಾನು ಮೂರನೇ ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದೇನೆ. ಕಳೆದ ಬಾರಿ ಪ್ರವಾಹದಿಂದ ಆದ ತಪ್ಪು ಸರಿ ಪಡಿಸಲು ಹೇಳಿರುವೆ. ಸತೀಶ್ ಜಾರಕಿಹೊಳಿ ಸೇರಿ ಯಾರೇ ಒಳ್ಳೆಯ ಸಲಹೆ ಕೊಟ್ಟರು ಅದನ್ನು ಪರಿಗಣಿಸಿ ಕೆಲಸ ಮಾಡುತ್ತೇವೆ ಎಂದರು.
ನೇಕಾರರ ಸಮಸ್ಯೆಗೆ ಸ್ಪಂದಿಸಲು ಕೇಂದ್ರ ಸಚಿವರ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿ ಪರಿಶೀಲನೆ ಮಾಡುವೆ ಎಂದರು.
ರಾಜ್ಯಸಭಾ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಅನಿಸಿಕೆಯನ್ನ ಪಕ್ಷದ ನಾಯಕರಿಗೆ ಹೇಳಿದ್ದೇವೆ. ಅದನ್ನ ನಾನು ಬಹಿರಂಗವಾಗಿ ಹೇಳುವುದಿಲ್ಲ. ರಾಜ್ಯಸಭೆ ಗೆ ಯಾರನ್ನ ಆಯ್ಕೆ ಮಾಡಬೇಕು ಅನ್ನೋದನ್ನ ಬಿಜೆಪಿ ಪಕ್ಷ ತೀರ್ಮಾನ ಮಾಡಲಿದೆ ಎಂದರು.
ಬಿಜೆಪಿ ಪಕ್ಷ ತೀರ್ಮಾನ ಮಾಡುವ ನಿರ್ಧಾರ ಕ್ಕೆ ನಾನು ಬದ್ಧನಾಗಿರುವೆ ಎಂದಅವರು ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ಸಣ್ಣವರಿದ್ದಾಗಿನಿಂದ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇಂತಹದ್ದಕ್ಕೆ ಸಿಎಂ ಬಿಎಸವೈ ಅಂಜುವುದಿಲ್ಲ ಎದುರಿಸುತ್ತಾರೆ.
ಉಮೇಶ್ ಕತ್ತಿ ಡಿನ್ನರ್ ಪಾರ್ಟಿ ಬಂಡಾಯವಲ್ಲ. ಹೊಟೇಲ್ ಬಂದ್ ಇದಾವೇ ಶಾಸಕರು ಅಲ್ಲಿ ಊಟ ಮಾಡಿದ್ದಾರೆ. ನಾಲ್ಕು ಜನ ಶಾಸಕರು ನಮ್ಮ ಮನೆಗೆ ಬಂದು ಊಟ ಮಾಡಿದ್ರೆ ಬಂಡಾಯ ಅಂದ್ರೆ ನಾವೇನು ಮಾಡೋಣಾ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ಮೂವರು ಕಾಂಗ್ರೆಸ್ ಶಾಸಕರು ನನ್ನ ಸಂಪರ್ಕ ದಲ್ಲಿ ಇದ್ದಾರೆ ಅಂತಾ ಹೇಳಿರುವೆ ಎಂದು ಸ್ಪಷ್ಟಪಡಿಸಿದರು.