ಧಾರವಾಡ prajakiran.com : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹೆಸರಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ‘ಹರ್ ಗರ್ ತಿರಂಗಾ’ ಕಾರ್ಯಕ್ರಮ ಸ್ವಾಗತಾರ್ಹ.
ಆದರೆ ಇದರ ಹೆಸರಿನಲ್ಲಿ ಖಾದಿ ಬದಲಿಗೆ ಪಾಲಿಸ್ಡರ್ ರಾಷ್ಟ್ರಧ್ವಜ ಬಳಕೆಗೆ ಮುಂದಾಗಿರುವುದು ಸರಿಯಲ್ಲ ಎಂದು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ಅವರು ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪೂರ್ವ ಭಾವಿ ಸಿದ್ಧತೆ ಇಲ್ಲದೇ ಈಗ ಪಾಲಿಸ್ಟರ್ ಧ್ವಜ ತಂದು ಮಾರಾಟ ಮಾಡುತ್ತಿರುವುದು ಯಸವ ಪುರುಷಾರ್ಥಕ್ಕೆ ಎಂದು ಪ್ರಶ್ನೆ ಮಾಡಿದರು.
ಖಾದಿ ರಾಷ್ಟ್ರ ಧ್ವಜ ಹಾರಾಟ ಮಾಡುವ ಬದಲು ಪಾಲಿಸ್ಟರ್ ಧ್ವಜ ಹಾರಾಟಕ್ಕೆ ಮುಂದಾಗಿರುವುದು ಖಂಡನೀಯ ಎಂದರು.
ಶ್ರೀ ರಾಮ ಸೇನೆ ನೇತೃತ್ವದಲ್ಲಿ ರಾಜ್ಯದಲ್ಲಿ ಖಾದಿ ಗ್ರಾಮೋದ್ಯೋಗದಲ್ಲಿ ತಯಾರಾದ ಉತ್ತಮ ಗುಣಮಟ್ಟದ ಧ್ವಜ ಹಾರಾಟ ಮಾಡುವ ಮೂಲಕ ನಾವು ದೇಶಭಕ್ತಿ ಪ್ರದರ್ಶನ ಮಾಡುತ್ತೇವೆ ಎಂದರು.
ರಾಷ್ಟ್ರ ಧ್ವಜಕ್ಕೆ ತನ್ನದೇ ಆದ ಗೌರವವಿದೆ ಅದನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಖಾದಿ ಗ್ರಾಮೋದ್ಯೋಗದಲ್ಲಿ ರಾಷ್ಟ್ರ ಧ್ವಜ ಖರೀದಿ ಮಾಡಬೇಕು ಎಂದು ಪ್ರಮೋದ ಮುತಾಲಿಕ್ ಆಗ್ರಹಿಸಿದರು.