ಧಾರವಾಡ prajakiran. com : ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ ಹೆಸರಿನಲ್ಲಿ ಕಿರಿ ಕಿರಿ ಉಂಟು ಮಾಡಬಾರದು ಎಂದು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ಧಾರವಾಡ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಗ್ರಾಮ ಒನ್ ಕೌಂಟರ್ ನಲ್ಲಿ ಎಲ್ಲಾ ಇಲಾಖೆಗಳ ಬಿಲ್ ತುಂಬಿಕೊಳ್ಳವಂತೆ ಅಂದರಂತೆ ಒಂದೇ ಕೌಂಟರ್ ನಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದ್ದರು.
ಗಣೇಶೋತ್ಸವ ಆಚರಣೆಗೆ ಸರ್ಕಾರ ನಿರ್ಬಂಧಗಳನ್ನು ಹೇರುವುದು ಸರಿಯಲ್ಲ. ಸರ್ಕಾರ ಈ ಕೂಡಲೇ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಎಲ್ಲರಿಗೂ ಅನುಮತಿ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಗಣೇಶೋತ್ಸವ ಸಂದರ್ಭದಲ್ಲಿ ಹಿಂದೂಗಳ ಕಡೆಯೇ ವ್ಯಾಪಾರ ವಹಿವಾಟು ಮಾಡಬೇಕು ಸರಣಿ ಹಿಂದೂ ಹತ್ಯೆಗೊಳು ಆಗುತ್ತಿದ್ದು ಈ ಕುರಿತು ಒಮ್ಮೆ ಯೋಚಿಸಿ ನಾವು ಮುಸ್ಲಿಂ ವ್ಯಾಪಾರಿಗಳ ಜೋತೆ ವ್ಯಾಪಾರ ಮಾಡುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದರು.
*ಪಿಓಪಿ ಗಣಪತಿ ನಿಷೇಧಕ್ಕೆ ಆಗ್ರಹ*
ಈ ಹಿಂದಿನ ಧಾರವಾಡ ಜಿಲ್ಲಾಧಿಕಾರಿಗಳು ಪಿಓಪಿ ಗಣಪತಿ ನಿಷೇಧ ಮಾಡಿದರು ಆದರೆ ಈಗ ಮಾರುಕಟ್ಟೆಯಲ್ಲಿ ಪಿಓಪಿ ಗಣಪತಿ ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ
ಇದು ಸರಿಯಲ್ಲ ಕೂಡಲೇ ಜಿಲ್ಲಾಡಳಿತ ಗಮನ ಹರಿಸಬೇಕು ಎಂದರು. ಮಣ್ಣಿನ ಗಣಪತಿಯನ್ನು ಪೂಜಿಸಿ ಸ್ಥಾಪಿಸಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಗಣಪತಿ ಆಶಿರ್ವಾದ ಪಡೆಯಬೇಕು ಎಂದು ತಿಳಿಸಿದರು.
*ಡಿಜೆ ಹೆಚ್ಚುವುದು ಸರಿಯಲ್ಲ ಮುತ್ತಾಲಿಕ ಮನವಿ*
ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಡಿಜೆ ಹೆಚ್ಚುವುದು ಸರಿಯಲ್ಲ ಈ ಕುರಿತು ಸ್ವಯಂ ಪ್ರೇರಿತರಾಗಿ ಡಿಜೆ ಹೆಚ್ಚುವುದು ಬಿಡಬೇಕು ಎಂದು ಮನವಿ ಮಾಡಿದರು.
ಮೈಕ್ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಮುಸ್ಲಿಮರಿಗೆ ಒಂದು ನ್ಯಾಯ ಹಿಂದೂಗಳಿಗೆ ಒಂದು ನ್ಯಾಯ ಸರಿಯಲ್ಲ ಈ ಭಾರಿ ಗಣೇಶೋತ್ಸವ ಸಮಿತಿಗಳು ಮೈಕ್ ಅನುಮತಿ ತೆಗೆದುಕೊಳ್ಳುವುದು ಬೇಡ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ, ಕಲಾವಿದ ಮಂಜುನಾಥ ಹಿರೇಮಠ ಸೇರಿದಂತೆ ಹಲವರು ಇದ್ದರು