ಧಾರವಾಡ prajakiran.com : ಧಾರವಾಡದ ಪ್ರಥಮ ಪಿಯುಸಿ ವಿದ್ಯಾರ್ಥಿ ಯೊಬ್ಬ ಪರೀಕ್ಷಾ ದಿನಾಂಕ ವನ್ನು ಮುಂದೂಡುವಂತೆ ಶಿಕ್ಷಣ ಸಚಿವ ಸುರೇಶಕುಮಾರ ಅವರಿಗೆ ಪತ್ರ ಬರೆದಿದ್ದಾನೆ.
ಅದರ ಪ್ರತಿ ಪ್ರಜಾಕಿರಣ.ಕಾಮ್ ಗೆ ಲಭ್ಯವಾಗಿದ್ದು, ಧಾರವಾಡದ ಶಮಂತ್ ಹಿರೇಮಠ ಎಂಬಾತನೇ ಪತ್ರ ಬರೆದ ವಿದ್ಯಾರ್ಥಿಯಾಗಿದ್ದು, ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಕಾಲೇಜು ಜೀವನ ರೂಪಿಸುಬ ಮೊದಲ ಮೆಟ್ಟಲಾಗಿದ್ದು, ವಿದ್ಯಾರ್ಥಿಗಳು ವಿಜ್ಞಾನ ವಿಭಾಗದ ವಿಷಯಗಳ ಕುರಿತು ಆಳವಾಗಿ ಅರಿತುಕೊಂಡು ಮುಂದೆ ಇಂಜಿನಿಯರಿಂಗ್ ಇಲ್ಲವೇ ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕಾದ ಹಿನ್ನೆಲೆಯಲ್ಲಿ ಅವರಿಗೆ ಸ್ವಲ್ಪ ಮಟ್ಟಿಗೆ ಓದಲು ಹಾಗೂ ಓದಿದ ವಿಷಯವನ್ನು ಮನನ ಮಾಡಿಕೊಳ್ಳಲು ಸಮಯಾವಕಾಶ ಬೇಕಾಗುತ್ತದೆ.
ಹೀಗಾಗಿ ಪರೀಕ್ಷಾ ದಿನಾಂಕ ವನ್ನು ಅವಸರದಲ್ಲಿ ನಿಗದಿ ಪಡಿಸದೆ ಸ್ವಲ್ಪ ದಿನಗಳ ಮಟ್ಟಿಗೆ ಮುಂದೂಡುವಂತೆ ಮನವಿ ಮಾಡಿದ್ದಾರೆ.
ಸವಿವರವಾದ ವಿಷಯವನ್ನು ಪ್ರಸ್ತಾಪಿಸಿದ್ದು, ಗೂಗಲ್ ಫಾರ್ಮ್ಸ್ ನಲ್ಲಿ ಕ್ಯಾಂಪೇನ್ ಮಾಡಿದ್ದಾನೆ.
ಈ ಅಭಿಯಾನದಲ್ಲಿ ನೀವು ಭಾಗವಹಿಸಲು ಈ ಫಾರ್ಮ್ ತುಂಬಿ
ಅದಕ್ಕೆ ಬಹಳಷ್ಟು ವಿದ್ಯಾರ್ಥಿಗಳು ಹಾಗೂ ಪೋಷಕರು ಸಹಮತ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಶಿಕ್ಷಣ ಸಚಿವ ಸುರೇಶಕುಮಾರ ಕೂಡ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆಯನ್ನು ನೀಡಿದ್ದಾರೆ.
ಮುಂಬರುವ ದಿನಗಳಲ್ಲಿ ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆ ಯಾವ ರೀತಿಯ ನಿರ್ಧಾರವನ್ನು ಪ್ರಕಟಿಸಲಿದೆ ಎಂಬುದು ಕಾದು ನೋಡಬೇಕಿದೆ.