ವರದಿ : ಪ್ರಶಾಂತ ಹೂಗಾರ್
ಸವದತ್ತಿ prajakiran.com : ಸವದತ್ತಿಯಲ್ಲಿ ಕಳೆದ ನಾಲ್ಕು-ಐದು ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಐತಿಹಾಸಿಕ ಕೋಟೆ ಸೇರಿ ಹಲವು ಮನೆಗಳು ಬಿದ್ದಿದ್ದು ಕೆಲವು ಪ್ರದೇಶಗಳು ಜಲಾವೃತವಾಗಿದ್ದವು.
ಜಲಾವೃತಗೊಂಡ ಮತ್ತು ಹಾನಿಗೊಳಗಾದ ಪ್ರದೇಶಗಳಿಗೆ ಸವದತ್ತಿ ಶಾಸಕ ಹಾಗೂ ವಿಧಾನಸಭಾ ಉಪಸಭಾಪತಿ ಆನಂದ ಮಾಮನಿ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು ಪಟ್ಟಣದಲ್ಲಿ ಸುರಿಯುತ್ತಿರುವ ಮಳೆಗೆ ಐತಿಹಾಸಿಕ ದೇಸಾಯಿ ಗೋಡೆಯು ಒಂದು ಭಾಗವು ಸಹ ಕುಸಿದು ಬಿದ್ದಿದ್ದು.
ಕೋಟೆ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಜಿಲ್ಲಾಧಿಕಾರಿಯ ಗಮನಕ್ಕೊ ತರಲಾಗಿದೆ. ವಿಶೇಷ ಅನುದಾನದಡಿ ಕೋಟೆ ಅಭಿವೃದ್ಧಿಗೆ ಪ್ರಯತ್ನ ಮಾಡಲಾಗುವುದು ಎಂದರು
ಭಾರಿ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಾರ್ವಜನಿಕರಿಗೆ ತೊಂದರೆ ಆಗಿದೆ ಕೂಡಲೆ ನೀರನ್ನು ತೆರವುಗೊಳಿಸಿ ತಗ್ಗು ಮುಚ್ಚುವ ಕಾರ್ಯ ಮಾಡಲಾಗುತ್ತದೆ.
ಇಂತಹ ಸ್ಥಳಗಳಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಐದು (5) ಕೋಟಿ ರೂಪಾಯಿಗಳನ್ನು ತಂದು ಕಾಂಕ್ರೀಟ್ ರಸ್ತೆ ಮತ್ತು ಚರಂಡಿಗಳನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ.
ಎರಡು ನೂರು (200) ಕೋಟಿಯಲ್ಲಿ ಆಧುನಿಕ ಮಾದರಿಯಲ್ಲಿ ತರಕಾರಿ ಮಾರುಕಟ್ಟೆ ನಿರ್ಮಿಸಲು ರೂಪುರೇಷೆ ತಯಾರಾಗಿದೆ. ಬೇಗನೆ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.
ಮನೆ ಇಲ್ಲದವರಿಗೆ ಸಾವಿರದ ಒಂದುನೂರು (1100) ಮನೆಗಳ ನಿರ್ಮಾನಕ್ಕೆ ಸಹಾಯಧನ ಸೌಲಭ್ಯ ನೀಡಲಾಗುತ್ತಿದ್ದು ಪುರಸಭೆಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಪುರಸಭೆ ಸದಸ್ಯ ಶಿವಾನಂದ ಹೂಗಾರ, ದರೆಪ್ಪ ಮೆಡ್ಲಿ , ಎಮ್,ಟಿ, ಸಿಗ್ಲಿ , ಪ್ರೊಜೆಕ್ಟ್ ಅಧಿಕಾರಿ ವಿಜಯಕುಮಾರ್ ಹೊರಕೇರಿ, ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ಇಂಜಿನಿಯರ್ ನಿರ್ಮಲಾ ನಾಯಕ, ಬಾಬು ಇನಾಮತಿ, ಶಂಕರ ದೇಸಾಯಿ, ಬಸಯ್ಯ ಹೊಂಗಲವರ ಇತರರು ಇದ್ದರು.