ಧಾರವಾಡ prajakiran.com : ಅನುದಾನ ರ್ದುಬಳಕೆ ಆರೋಪ ಕುರಿತಂತೆ ಹಾಲಿ ಮಾಜಿ ಜಿಪಂ ಸದಸ್ಯರು ಕೈ ಕೈ ಮಿಲಾಯಿಸಿದ ಘಟನೆ ಧಾರವಾಡ ತಾಲೂಕಿನ ಗಳಗಿ ಹುಲಕೊಪ್ಪದಲ್ಲಿ ನಡೆದಿದೆ.
ಹಾಲಿ ಜಿಪಂ ಸದಸ್ಯಅಣ್ಣಪ್ಪ ದೇಸಾಯಿ ಹಾಗೂ ಮಾಜಿ ಜಿಪಂ ಉಪಾಧ್ಯಕ್ಷ ಶಿವಲಿಂಗ ಚಿಕ್ಕಣ್ಣವರ ನಡುವೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು.
ಸ್ಥಳದಲ್ಲಿದ್ದ ಗ್ರಾಮದ ಮುಖಂಡರು ಇಬ್ಬರನ್ನು ಸಮಾಧಾನ ಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಗಳಗಿ ಹುಲಕೊಪ್ಪ ಗ್ರಾಪಂನಲ್ಲಿ 80 ಲಕ್ಷಅನುದಾನ ದುರುಪಯೋಗಗೊಂಡ ಆರೋಪದ ಹಿನ್ನಲೆಯಲ್ಲಿ ಸಭೆ ಕರೆಯಲಾಗಿತ್ತು.
ಈ ಸಭೆಯಲ್ಲಿ ಆರೋಪ-ಪ್ರತ್ಯಾರೋಪ ತಾರಕಕ್ಕೇರಿ ವೈಯಕ್ತಿಕಕ್ಕೆ ತಿರುಗಿತು ಎನ್ನಲಾಗಿದೆ.
ಇತ್ತೀಚೆಗೆ ಗ್ರಾಮಸ್ಥರು ಉದ್ಯೋಗ ಖಾತ್ರಿ ಯೋಜನೆಯಡಿ ಹಾಗೂ 14ನೇ ಹಣಕಾಸು ಯೋಜನೆ ಅಡಿ ಗ್ರಾಪಂನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಗ್ರಾಪಂಗೆ ಮುತ್ತಿಗೆ ಹಾಕಿ ಇದರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಹಿನ್ನಲೆಯಲ್ಲಿ ಜಿಪಂ ಸಿಇಒ ತಂಡ ರಚಿಸಿದ್ದು, 7 ದಿನಗಳಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.