ಬೆಂಗಳೂರು prajakiran.com :
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿಕಟ ಪೂರ್ವ ಮಾಧ್ಯಮ ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತ
ಮಹದೇವ ಪ್ರಕಾಶ್ ಅವರು ಕೋವಿಡ್ ಗೆ ಬಲಿಯಾಗಿದ್ದಾರೆ.
ಕಳೆದ ಹಲವು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ಶುಕ್ರವಾರ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದರು.
ಅವರು ‘ಈ ಭಾನುವಾರ’ ಪತ್ರಿಕೆ ಸಂಪಾದಕರಾಗಿದ್ದರು.
ಜೊತೆಗೆ ರಾಜಕೀಯ ವಿಮರ್ಶಕದ ಮೂಲಕ ನಾಡಿನ ಮನೆ ಮಾತಾಗಿದ್ದರು.
ಅವರ ಅಗಲಿಕೆಗೆ ಅನೇಕ ಹಿರಿಯ ರಾಜಕಾರಣಿಗಳು, ಪತ್ರಕರ್ತರು ಕಂಬನಿ ಮಿಡಿದಿದ್ದಾರೆ.