ಮೈಸೂರು prajakiran.com : ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಆರೋಪಿಗೂ ಕರೋನಾ ಸೋಂಕು ಇರುವುದು ದೃಢಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.
ಕೊಲೆ ಬಳಿಕ ಆರೋಪಿ ಬೆಂಗಳೂರಿನಲ್ಲಿ ತಲೆ ಮೆರೆಸಿಕೊಂಡಿದ್ದ. ಆನಂತರ ಆತ ವಿಜಯ ನಗರ ಪೊಲೀಸರಿಗೆ ಶರಣಾಗಿದ್ದ. ಕೋವಿಡ್ ತಪಾಸಣೆ ವೇಳೆ ಆತನಿಗೆ ಸೋಂಕು ದೃಢವಾಗಿದೆ.
ಆತನನ್ನು ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಇಡಲಾಗಿತ್ತು. ಇತನ ಜೊತೆಗೆ ಇಪ್ಪತ್ತು ಆರೋಪಿಗಳಿದ್ದರು.
ಮೂರು ದಿನದ ಹಿಂದೆ ಆರೋಪಿಗೆ ಟೆಸ್ಟ್ ಮಾಡಿಸಲಾಗಿತ್ತು. ಹೀಗಾಗಿ 20 ಜನ ಆರೋಪಿಗಳನ್ನು ಕ್ವಾರಂಟಿನ್ ಮಾಡಲಾಗಿದೆ.
ಇದರಿಂದಾಗಿ 20 ಜನ ಆರೋಪಿಗಳಿಗೆ ಕರೋನಾ ಸಂಕಷ್ಟಎದುರಾಗಿದ್ದು, ವರದಿ ನೆಗೆಟಿವ್ ಬರುತ್ತಾ ಅಥವಾ ಪಾಸಿಟಿವ್ ಬರುತ್ತಾ ಎಂದು ಕಂಗಲಾಗಿದ್ದಾರೆ.
ಇದಲ್ಲದೆ, ಆತನನ್ನು ಹಿಡಿದು ಜೈಲಿಗೆ ಕಳುಹಿಸಿದ ಪೊಲೀಸ್ ಸಿಬ್ಬಂದಿಗೂ, ಮತ್ತು ಆತನನ್ನು ಜೈಲಿಗೆ ಸೇರಿಸಿಕೊಂಡ ಜೈಲು ಸಿಬ್ಬಂದಿಗೂ ಇದೀಗ ಢವ ಢವ ಶುರುವಾಗಿದೆ.
ಈ ಕೊಲೆ ಆರೋಪಿಯಿಂದ ಇನ್ನೆಷ್ಟು ಜನರಿಗೆ ಕರೋನಾ ಹರಡುತ್ತದೆ. ಮತ್ತೇಷ್ಟು ಜನ ಕ್ವಾರಂಟಿನ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.