ರಾಜ್ಯ

ಮೈಸೂರು ಕೇಂದ್ರ ಕಾರಾಗೃಹಕ್ಕೆ ವ್ಯಾಪಿಸಿದ ಕರೋನಾ ನಂಟು …!




ಮೈಸೂರು prajakiran.com : ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಆರೋಪಿಗೂ ಕರೋನಾ ಸೋಂಕು ಇರುವುದು ದೃಢಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.

ಕೊಲೆ ಬಳಿಕ ಆರೋಪಿ ಬೆಂಗಳೂರಿನಲ್ಲಿ ತಲೆ ಮೆರೆಸಿಕೊಂಡಿದ್ದ. ಆನಂತರ ಆತ ವಿಜಯ ನಗರ ಪೊಲೀಸರಿಗೆ ಶರಣಾಗಿದ್ದ. ಕೋವಿಡ್ ತಪಾಸಣೆ ವೇಳೆ ಆತನಿಗೆ ಸೋಂಕು ದೃಢವಾಗಿದೆ.



ಆತನನ್ನು ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಇಡಲಾಗಿತ್ತು. ಇತನ ಜೊತೆಗೆ ಇಪ್ಪತ್ತು ಆರೋಪಿಗಳಿದ್ದರು.

ಮೂರು ದಿನದ ಹಿಂದೆ ಆರೋಪಿಗೆ ಟೆಸ್ಟ್ ಮಾಡಿಸಲಾಗಿತ್ತು. ಹೀಗಾಗಿ 20 ಜನ ಆರೋಪಿಗಳನ್ನು ಕ್ವಾರಂಟಿನ್ ಮಾಡಲಾಗಿದೆ.

ಇದರಿಂದಾಗಿ 20 ಜನ ಆರೋಪಿಗಳಿಗೆ ಕರೋನಾ ಸಂಕಷ್ಟಎದುರಾಗಿದ್ದು, ವರದಿ ನೆಗೆಟಿವ್ ಬರುತ್ತಾ ಅಥವಾ ಪಾಸಿಟಿವ್ ಬರುತ್ತಾ ಎಂದು ಕಂಗಲಾಗಿದ್ದಾರೆ.



ಇದಲ್ಲದೆ, ಆತನನ್ನು ಹಿಡಿದು ಜೈಲಿಗೆ ಕಳುಹಿಸಿದ ಪೊಲೀಸ್ ಸಿಬ್ಬಂದಿಗೂ, ಮತ್ತು ಆತನನ್ನು ಜೈಲಿಗೆ ಸೇರಿಸಿಕೊಂಡ ಜೈಲು ಸಿಬ್ಬಂದಿಗೂ ಇದೀಗ ಢವ ಢವ ಶುರುವಾಗಿದೆ.

ಈ ಕೊಲೆ ಆರೋಪಿಯಿಂದ ಇನ್ನೆಷ್ಟು ಜನರಿಗೆ ಕರೋನಾ ಹರಡುತ್ತದೆ. ಮತ್ತೇಷ್ಟು ಜನ ಕ್ವಾರಂಟಿನ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *