ರಾಜ್ಯ ರಾಷ್ಟ್ರೀಯ

ಹುಬ್ಬಳ್ಳಿ ಗಣೇಶೋತ್ಸವ ವಿವಾದ : ಕಳಚಿದ ಕಾಂಗ್ರೆಸ್ ಪಕ್ಷದ ಮುಖವಾಡ

*ಕಳಚಿದ ಕಾಂಗ್ರೆಸ್ ಪಕ್ಷದ ಮುಖವಾಡ*

ಹುಬ್ಬಳ್ಳಿ ಪ್ರಜಾಕಿರಣ.ಕಾಮ್ : 
ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ಶ್ರೀ ಗಜಾನನ ಪ್ರತಿಷ್ಠಾಪನೆ ಕುರಿತು ಮಹಾನಗರ ಪಾಲಿಕೆ ಕೈಗೊಂಡ ತೀರ್ಮಾನದ ವಿರುದ್ಧ ಕಾಂಗ್ರೆಸ್ ಪಕ್ಷದ, ಹು-ಧಾ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಸುವರ್ಣ ಕಲ್ಲಕುಂಟ್ಲ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ಗಣೇಶ ಪ್ರತಿಷ್ಠಾಪನೆಗೆ ವಿರೋಧ ವ್ಯಕ್ತಪಡಿಸಿ ಅಪೀಲ್ ಹೋಗಿದ್ದು, ಇದರಿಂರ ಕಾಂಗ್ರೆಸ್ ಪಕ್ಷದ ಮುಖವಾಡ ಕಳಚಿದಂತಾಗಿದೆ.

ಈ ಮೂಲಕ ಹಿಂದು ವಿರೋಧಿ ಧೋರಣೆ ಅನುಸರಣೆ, ಅಲ್ಪಸಂಖ್ಯಾತರ ಓಲೈಕೆಯೇ ಕಾಂಗ್ರೆಸ್ ಪಕ್ಷದ ಉದ್ದೇಶ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಅಂಜುಮನ್ ಸಂಸ್ಥೆಯ ಜೊತೆ ಕೈಗೂಡಿಸಿದ ಕಾಂಗ್ರೆಸ ಪಕ್ಷವು, ಹಿಂದುಗಳ ಪ್ರಥಮ ಆರಾಧಕ ಗಣೇಶನ ಪ್ರತಿಷ್ಠಾಪನೆ ವಿರೋಧಿಸುವುದು ಸರಿಯಲ್ಲ.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಕಳೆದ ಬಾರಿ ಗಣೇಶನ ಪೂಜೆಯಲ್ಲಿ ಪಾಲ್ಗೊಂಡು ಮಂಗಳಾರತಿ ಸಲ್ಲಿಸಿದ್ದರು.

ಹಾಗು ಈ ಬಾರಿ ಕಾಂಗ್ರೆಸ್ ಪಕ್ಷ ಸೇರಿ ತಮ್ಮ ಪಕ್ಷದ ಪಾಲಿಕೆ ವಿರೋಧ ಪಕ್ಷದ ನಾಯಕರ‌ ಮುಖಾಂತರ ಅಂಜುಮನ್ ಇಸ್ಲಾಂ ಜೊತೆಗೂಡಿ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಸೂಚಿಸಿ ಕಳುಹಿಸಿದ್ದು ನೋಡಿದರೆ ಶೆಟ್ಟರ್ ಅವರು ಸಂಪೂರ್ಣ ಹಿಂದುಗಳ ವಿರೋಧಿ ಎಂಬುದು ಸಾಬೀತಾಗಿದೆ.

ಅವಳಿನಗರದ ಹಾಗೂ ನಾಡಿನ ಜನತೆಗೆ ಈಗ ಅರಿವಾಗಿದೆ. ರಾಣಿ ಚೆನ್ನಮ್ಮ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಯಾಗಲು ವಿರೋಧ ವ್ಯಕ್ತಪಡಿಸಿದ್ದು ಕಾಂಗ್ರೆಸ್ ಮತ್ತೊಮ್ಮೆ ಜಗಜ್ಜಾಹೀರಾಗಿದೆ.

ಕಾಂಗ್ರೆಸ್ ಪಕ್ಷವು
ಹಿಂದು ವಿರೋಧಿ ಮತ್ತು
ಅಲ್ಪಸಂಖ್ಯಾತರ ಪರ ಇದೆ.
ಆದರೆ ವಿಘ್ನ ನಿವಾರಕನ ಆಶೀರ್ವಾದದಿಂದ ಉಚ್ಛ ನ್ಯಾಯಾಲಯದ ಮುಖಾಂತರ ಹಿಂದು ವಿರೋಧಿ ಕಾಂಗ್ರೆಸ್ ಹಾಗೂ
ಆ ಪಕ್ಷದ ಮುಖಂಡರಿಗೆ ತಕ್ಕ ಪಾಠ ಕಲಿಸಿದಂತಾಗಿದೆ.

ಈ ವಿಷಯದಲ್ಲಿ
ಸಮಸ್ತ ಹಿಂದುಗಳಿಗೆ ವಿಜಯ ಲಭಿಸಿದಂತಾಗಿದೆ ಮಾಜಿ ಮಹಾಪೌರಈರೇಶ ಅಂಚಟಗೇರಿ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *