ರಾಜ್ಯ

ಧಾರವಾಡದಲ್ಲಿ ಪರವಾನಿಗೆ ಪಡೆಯದೆ ಮದುವೆ ಮಾಡಿದವರ ಮೇಲೆ ಎಫ್ ಐ ಆರ್

ಧಾರವಾಡ prajakiran.com : ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ, ಗಾಳಿಗೆ ತೂರಿ 
ಮದುವೆ ನಡೆದಿರುವುದು ಬೆಳಕಿಗೆ ಬಂದಿದೆ.

ವಧುವಿನ ಪಾಲಕರು ಕಲಘಟಗಿಯ ಸಂಗ್ರೇಶಕೊಪ್ಪದವರಾಗಿದ್ದಾರೆ.

ಅವರು ಮದುವೆ ಮುಗಿಸಿಕೊಂಡು ನವಲೂರ ಬ್ರಿಜ್ ಹತ್ತಿರ ಹೋಗುವಾಗ
ತಡೆದು ತಪಾಸಣೆ ಮಾಡಿದಾಗ ಈ ಘಟನೆ ಬಯಲಾಗಿದೆ.

ಜಿಲ್ಲೆಯಲ್ಲಿ ಮದುವೆಗಳ ಆಯೋಜನೆ ನಿಷೇಧಿಸಲಾಗಿದೆ. ಮತ್ತು ಈ ಮದುವೆಗೆ ಯಾವುದೇ ಅನುಮತಿ ಕೂಡ ಪಡೆದಿರಲಿಲ್ಲ.

ಆದ್ದರಿಂದ ಧಾರವಾಡದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ನಿರ್ದೇಶನದ ಮೇರೆಗೆ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ 15-20ಜನ ಹಾಗೂ ಬಸವರಾಜ ಕಲ್ಲಪ್ಪ
ನಿಗದಿಯ ವಿರುದ್ಧ
ಎಫ್. ಐ. ಆರ್. ದಾಖಲಿಸಲಾಗಿದೆ ಎಂದು ಧಾರವಾಡ ತಹಸಿಲ್ದಾರ ಸಂತೋಷ ಬಿರಾದಾರ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *