ಧಾರವಾಡ prajakiran.com : ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ, ಗಾಳಿಗೆ ತೂರಿ
ಮದುವೆ ನಡೆದಿರುವುದು ಬೆಳಕಿಗೆ ಬಂದಿದೆ.
ವಧುವಿನ ಪಾಲಕರು ಕಲಘಟಗಿಯ ಸಂಗ್ರೇಶಕೊಪ್ಪದವರಾಗಿದ್ದಾರೆ.
ಅವರು ಮದುವೆ ಮುಗಿಸಿಕೊಂಡು ನವಲೂರ ಬ್ರಿಜ್ ಹತ್ತಿರ ಹೋಗುವಾಗ
ತಡೆದು ತಪಾಸಣೆ ಮಾಡಿದಾಗ ಈ ಘಟನೆ ಬಯಲಾಗಿದೆ.
ಜಿಲ್ಲೆಯಲ್ಲಿ ಮದುವೆಗಳ ಆಯೋಜನೆ ನಿಷೇಧಿಸಲಾಗಿದೆ. ಮತ್ತು ಈ ಮದುವೆಗೆ ಯಾವುದೇ ಅನುಮತಿ ಕೂಡ ಪಡೆದಿರಲಿಲ್ಲ.
ಆದ್ದರಿಂದ ಧಾರವಾಡದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ನಿರ್ದೇಶನದ ಮೇರೆಗೆ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ 15-20ಜನ ಹಾಗೂ ಬಸವರಾಜ ಕಲ್ಲಪ್ಪ
ನಿಗದಿಯ ವಿರುದ್ಧ
ಎಫ್. ಐ. ಆರ್. ದಾಖಲಿಸಲಾಗಿದೆ ಎಂದು ಧಾರವಾಡ ತಹಸಿಲ್ದಾರ ಸಂತೋಷ ಬಿರಾದಾರ ತಿಳಿಸಿದ್ದಾರೆ.