*ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ*
*ಕಮೀಷನರ್ ಆದೇಶ ತಡೆಹಿಡಿದ ಹೈಕೋರ್ಟ್*
*ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮತ ಚಲಾವಣೆ ತಡೆಹಿಡಿದಿದ್ದ ಕಮಿಷನರ್*
ಧಾರವಾಡ ಪ್ರಜಾಕಿರಣ.ಕಾಮ್ : ಜೂನ್ 20 ರಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗು ಉಪಮೇಯರ್ ಚುನಾವಣೆಯಲ್ಲಿ ಶ ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ
ಅವರ ಹೆಸರನ್ನು ಚುನಾವಣಾ ಯಾದಿಯಿಂದ ಕಮೀಷನರ್ ಕೈ ಬಿಟ್ಟಿದ್ದರು.
ಈ ಆದೇಶ ಪ್ರಶ್ನಿಸಿ ಕರ್ನಾಟಕ ಉಚ್ಚ ನ್ಯಾಯಾಲಯ ಧಾರವಾಡದಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪಸಿಂಗ್ ಯರೂರ ಅವರು ಕಮೀಷನರ್ ಆದೇಶವನ್ನು ತಡೆಹಿಡಿದು ಸಂಕನೂರು ಅವರಿಗೆ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ನೀಡಿ ಮಹತ್ವದ ಆದೇಶ ಹೊರಡಿಸಿದರು.
ಸಂಕನೂರ ಅವರ ಪರವಾಗಿ ಹಿರಿಯ ನ್ಯಾಯವಾದಿಗಳಾದ ಶ್ರೀರಂಗಾ ಮತ್ತು ಎಸ್.ಬಿ.ಅಂಚಟಗೇರಿ, ಮೃತ್ಯುಂಜಯ ಹಳ್ಳಿಕೇರಿ, ಅರ್ಚನಾ ಜೋಶಿ ವಾದ ಮಂಡಿಸಿದ್ದರು.