ಹುಬ್ಬಳ್ಳಿ prajakiran.com : ಲಾಕ್ ಡೌನ್ ಅವಧಿಯಲ್ಲಿ ಪೊಲೀಸ್ ಜೀಪ್ ದುರ್ಬಳಕೆ ಮಾಡಿದ ಆರೋಪದ ಮೇಲೆ ಹುಬ್ಬಳ್ಳಿಯ ಪಿಎಸ್ಐ ಅಮಾನತುಗೊಂಡಿದ್ದಾರೆ.
ಹುಬ್ಬಳ್ಳಿಯ ಪೊಲೀಸ್ ಅರಣ್ಯ ಘಟಕದ ಪಿಎಸ್ಐ ಶಿವಾನಂದ ಅರೆನಾಡ್ ಅಮಾನತು ಆದ ಪಿಎಸ್ಐ ಆಗಿದ್ದಾರೆ.
ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಏ-17 ರಂದು ಅರಣ್ಯ ಘಟಕಕ್ಕೆ ಸೇರಿದ KA-25 G-303 ಸಾರ್ವಜನಿಕರು ತೆಗೆದುಕೊಂಡು ಹೋಗಲು ಅನುವು ಮಾಡಿಕೊಟ್ಟಿದ್ದ ಪಿಎಸ್ಐ ಶಿವಾನಂದಅವರ ಆಡಿಯೋ ಹಾಗೂ ಅವರು ತೆಗೆದುಕೊಂಡು ಹೋಗಿದ್ದ ವಾಹನದ ವೀಡಿಯೋ ವೈರಲ್ ಆಗಿತ್ತು.
ಅವರೆಲ್ಲರೂ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯ ಹಿತ್ತಲಮಕ್ಕಿ ಚೆಕ್ ಪೋಸ್ಟ್ ನಲ್ಲಿಸಿಕ್ಕಿ ಹಾಕಿಕೊಂಡಿದ್ದರು. ಇಲಾಖೆ ವಾಹನ ಬಳಸಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ದ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಪರೋಕ್ಷವಾಗಿ ಭಾಗಿಯಾಗಿದ್ದ ಪಿಎಸ್ಐ ಶಿವಾನಂದ ವಿರುದ್ದ ಆರೋಪ ಸಾಬೀತಾಗಿದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಧಾರವಾಡ ಪೊಲೀಸ್ ಅರಣ್ಯ ರಕ್ಷಕ ದಳಕ್ಕೆ ಸೇರಿದ್ದ ಜೀಪನ್ನ ಹುಬ್ಬಳ್ಳಿಯ ಗೌಸ್ ಹಣಗಿ, ಅಬ್ದುಲ್ ರಜಾಕ್, ಮುತ್ತಪ್ಪ ಪಾಟೀಲ್ ಹಾಗೂ ಇಮ್ತಿಯಾಜ್ ಕ್ವಾಜಾ ಹುಸೇನ್ ಎಂಬುವವರು ಉತ್ತರ ಕನ್ನಡ ಜಿಲ್ಲೆಗೆ ತೆಗೆದುಕೊಂಡು ಹೋಗಿದ್ದರು.
ಗುತ್ತಿಗೆದಾರರೊಬ್ಬರಿಗೆ ಸೇರಿದ ಜೆಸಿಬಿಯನ್ನ ತೆಗೆದುಕೊಂಡು ಬರಲು ಜೀಪ್ ಒಯ್ದಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದರು.
ಈ ಇಬ್ಬರು ಜೆಸಿಬಿ ಚಾಲಕರನ್ನ ಬಿಟ್ಟು ಬರಲು ಇನ್ನಿಬ್ಬರು ಜೀಪ್ನಲ್ಲಿ ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು.