ಬೆಂಗಳೂರು prajakiran.com : ಸಮಾಜದಲ್ಲಿ ಶಾಂತಿಭಂಗ ಮಾಡುವ ಫೇಸ್ ಬುಕ್ ಹಾಗೂ ವಾಟ್ಸಪ್ ಪೋಸ್ಟ್ ಗಳ ಮೇಲೆ ಪೊಲೀಸ್ ಇಲಾಖೆ ತೀವ್ರ ನಿಗಾವಹಿಸಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಡಿಜೆ.ಹಳ್ಳಿ ಕೆ.ಜೆ ಹಳ್ಳಿಯಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಮುಂಜಾಗ್ರತ ಕ್ರಮವಾಗಿ 144 ಕಲಂ ವಿಸ್ತರಣೆ ಮಾಡಲಾಗಿದೆ. ಎಲ್ಲರೂ ಶಾಂತಿ ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಪ್ರಕರಣ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ. ಈ ತನಿಖೆಯಲ್ಲಿ ಹಲವಾರು ವಿಷಯಗಳು ಬಂದಿವೆ.
ಎಲ್ಲಕ್ಕಿಂತ ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಫೇಸ್ ಬುಕ್ ನಲ್ಲಿ ಅವಹೇಳನ,ಶಾಂತಿಭಂಗ, ಜನರಲ್ಲಿ ವೈಷಮ್ಯ ಮೂಡಿಸುವ ವಿಚಾರ ಬರುತ್ತಿರುವುದರಿಂದ ಘಟನೆ ನಂತರ ಕ್ರಮ ತೆಗೆದುಕೊಳ್ಳುವುದು ಒಂದು ಭಾಗವಾಗವಾದರೆ, ಘಟನೆಗಿಂತ ಮುಂಚಿತವಾಗಿ ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡಲು ಫೇಸಬುಕ್, ವಾಟ್ಸಅಪ್ ನಿಯಂತ್ರಣ ಮಾಡುವ ಕುರಿತು ಕೂಡ ಪ್ರಮುಖ ಅಧಿಕಾರಿಗಳ ಸಭೆ ನಡೆಸುವ ಜೊತೆಗೆ ಬರುವ ವಾರ ಸೈಬರ್ ಕ್ರೈಂ ತಜ್ಞರ ಸಮಾಲೋಚನೆ ನಡೆಸಲಾಗುವುದು ಎಂದರು.
ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಎನ್ ಮಾಡಬೇಕು ಎಂಬುದರ ಕುರಿತು ಚರ್ಚೆ ಮಾಡ್ತಿನಿ ಜೊತೆಗೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಗೆ ಸಂಪೂರ್ಣ ಭದ್ರತೆ ನೀಡ್ತಿವಿ.
ಅಷ್ಟೇ ಅಲ್ಲ ಅವರ ಮನೆಗೆ ಪೊಲೀಸ ಭದ್ರತೆ ನೀಡಲು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ವಿವರಿಸಿದರು.