ಧಾರವಾಡ prajakiran.com : ಧಾರವಾಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಮುಖಂಡ, ಬಡವರ ಬಂಧು, ಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸುವ ಜನನಾಯಕ
ದೀಪಕ ಚಿಂಚೊರೆ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಗೆಳೆಯರು ರೋಗಿಗಳಿಗೆ ಹಣ್ಣು ಹಂಪಲ ಹಾಗೂ ಬಿಸ್ಕಿಟ್ ವಿತರಣೆ ಮಾಡಿ ಮಾನವೀಯ ಮೌಲ್ಯಗಳನ್ನು ಸಾರಿದರು.
ಅದರಲ್ಲೂ ವಿಶೇಷವಾಗಿ ಹೆರಿಗೆ ವಾರ್ಡ್ ನ ತಾಯಂದಿರು ಹಾಗೂ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಿದರು.
ಈ ಸಂದರ್ಭದಲ್ಲಿ ಯಾಸೀನ್ ಹಾವೇರಿಪೇಟ್ , ಹೇಮಂತ ಗುರ್ಲಹೊಸುರ, ಮೆಹಬೂಬ ಮುಲ್ಲಾ, ಶಿವು ಚೆನ್ನಗೌಡ್ರ,ಆನಂದ ಸಿಂಗನಾಥ, ನಿಜಾಮ ರಾಹಿ, ಸೌರಭ ಮಾಸೇಕರ, ಗಜಾನನ ಇರಕಲ್, ಗೌರಮ್ಮ ಬಲೊಗಿ, ಕುಸುಮಾ ಜೈನ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.