ಬೆಂಗಳೂರು prajakiran.com : ಖತರ್ ನಾಕ್ ಆನ್ ಲೈನ್ ವಂಚಕನನ್ನು ಸೆರೆ ಹಿಡಿಯುವಲ್ಲಿ ಬೆಂಗಳೂರು ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ನಂದೀಶರಡ್ಡಿ ಅಲಿಯಾಸ ಬಾಬು ಎಂದು ಗುರುತಿಸಲಾಗಿದೆ. ಈತ ಒಎಲ್ ಎಕ್ಸ್ ನಲ್ಲಿ 5 ಸಾವಿರ ಕಳೆದುಕೊಂಡಿದ್ದ.
ಬಳಿಕ ಅದನ್ನೇ ದಂಧೆಯನ್ನಾಗಿಸಿಕೊಂಡು ವಂಚಿಸಲು ಆರಂಭಿಸಿದ. ಪ್ರತಿ ಬಾರಿಯೂ ಹೊಸ ಸಿಮ್ ಹಾಕಿ ಕಾರು ಮಾರುವುದಿದೆ.
ಬೈಕ್ ಮಾರುವುದಿದೆ ಎಂದು ನಂಬಿಸಿ ಬಲೆಗೆ ಹಾಕುತ್ತಿದ್ದ. ಟೆಸ್ಟ್ ಡ್ರೈವ್ ನೆಪದಲ್ಲಿ ವಾಹನ ಸಮೇತ ಪರಾರಿಯಾಗುತ್ತಿದ್ದ.
ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣೆಯ ಪೊಲೀಸರು ಇತನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನಿಂದ 9 ಲಕ್ಷ ನಗ ನಾಣ್ಯ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಒಎಲ್ ಎಕ್ಸ್ ನಲ್ಲಿ ಬಣ್ಣ ಬಣ್ಣದ ಜಾಹೀರಾತು ಹಾಕುತ್ತಿದ್ದ.
ಅದನ್ನು ನಂಬಿ ಬಂದವರಿಗೆ ಯಾಮಾರಿಸುತ್ತಿದ್ದ ಖದೀಮ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಈತ ಎಷ್ಟು ಜನರಿಗೆ ವಂಚಿಸಿದ್ದಾನೆ ಎಂಬುದರ ಕುರಿತು ಬೆಂಗಳೂರಿನ ತಿಲಕ್ ನಗರ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.