ನವದೆಹಲಿ prajakiran.com : ದೇಶದೆಲ್ಲಡೆ ದಿನದಿಂದ ದಿನಕ್ಕೆ ಕರೋನಾ ವೈರಸ್ ಸೋಂಕು ಹರಡುತ್ತಿರುವುದರಿಂದ ನಿರುದ್ಯೋಗ, ಸಾವು ನೋವು ಸಂಭವಿಸುತ್ತಲೇ ಇವೆ.
ಈ ನಡುವೆ ಜನರಿಗೆ ಬೆಲೆ ಹೆಚ್ಚಳದ ಬಿಸಿ ತಾಗುತ್ತಲೇ ಇದೆ. ಈ ಕುರಿತು ಖಾರವಾಗಿಯೇ ಟ್ವೀಟ್ ಮಾಡಿರುವ ಕಾಂಗ್ರೆಸ್ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರದ ವಿರುದ್ದ ಟ್ವೀಟ್ ವಾರ್ ಶುರು ಮಾಡಿದೆ.
ಲಾಕ್ ಡೌನ್, ಉದ್ಯೋಗ ನಷ್ಟದಿಂದಾಗಿ ದೇಶದ ಜನ ತತ್ತರಿಸಿದ್ದರೆ @narendramodi ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಜೂನ್ ನಲ್ಲಿ ನಿರಂತರ 23 ಬಾರಿ, ಜುಲೈ ನಲ್ಲಿ 9 ಬಾರಿ ಹಾಗೂ ಈಗ ಅಗಸ್ಟ್ ತಿಂಗಳಲ್ಲಿ 12 ಬಾರಿ ಪೆಟ್ರೋಲ್ ಬೆಲೆ ಏರಿಸಿ ಜನರ ಜೇಬಿಗೆ ಕೊಳ್ಳಿ ಇಡುತ್ತಿದೆ ಎಂದು ಕಿಡಿಕಾರಿದೆ.
ಅಲ್ಲದೆ, ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ ಆಗುತ್ತಿದ್ದರೂ ಕೇಂದ್ರ ಸರಕಾರ ಮಾತ್ರ ಬೆಲೆ ಇಳಿಕೆ ಮಾಡುವ ಬದಲಿಗೆ ಏರಿಕೆ ಮಾಡುತ್ತಲೇ ಸಾಗಿದೆ. ಇದು ಕೇಂದ್ರದ ಜನವಿರೋಧಿನೀತಿಗೆ ಸ್ಪಷ್ಟ ಕೈ ಗನ್ನಡಿಯಾಗಿದೆ ಎಂದು ಟೀಕಿಸಿದೆ.