ಧಾರವಾಡ prajakiran. com : ಪಶ್ಚಿಮ ಪದವೀಧರ ಮತಕ್ಷೇತ್ರದುನಾವಣೆಗೆ ಕೇವಲ ಒಂದುವಾರವಷ್ಟೇ ಬಾಕಿಯಿದ್ದರೂ ಈವರೆಗೆ ಅಭ್ಯರ್ಥಿಗಳಿಗೆ ಮತದಾರರ ಅಂತಿಮ ಪಟ್ಟಿ ತಲುಪದಿರುವುದು ಸರಿಯಾದ ಬೆಳವಣಿಗೆ ಅಲ್ಲ ಎಂದು ಕಾಂಗ್ರೆಸ್ ಪಕ್ಷದ ಮಾಧ್ಯಮ ವಿಶ್ಲೇಷಕ ಹಾಗೂ ಕೆಪಿಸಿಸಿ ಚುನಾವಣೆ ಕಾನೂನು ಸಮಿತಿ ಸದಸ್ಯರು ಆಗಿರುವ ಪಿ.ಎಚ್
ನೀರಲಕೇರಿ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಸೋಮವಾರ ನಗರದಲ್ಲಿ ಪ್ರಜಾಕಿರಣ.ಕಾಮ್ ದೊಂದಿಗೆ ಮಾತನಾಡಿ ಧಾರವಾಡ ಜಿಲ್ಲೆಯ ಅಧಿಕಾರಗಳ ನಡುವೆ ಹೊಂದಾಣಿಕೆ ಕೊರತೆ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಹೇಳಿದರು.
ಧಾರವಾಡ ಜಿಲ್ಲೆಯ ಅಧಿಕಾರಿಗಳು ತಮ್ಮ ಬಳಿ ಮಾಹಿತಿಯಿಲ್ಲ ಎಂದು ನುಣುಚಿಕೊಳ್ಳುವ ಮೂಲಕ ಜವಾಬ್ದಾರಿ ಹಾಗೂ ಹೊಣೆಗಾರಿಕೆ ಮರೆತಿದ್ದಾರೆ ಎಂದು ದೂರಿದರು.
ಅ. ೮ ರಂದು ಅಂತಿಮಪಟ್ಟಿ ಸಿದ್ದಗೊಂಡು ಅ. ೧೦ ಇಲ್ಲವೇ ೧೧ ರಂದು ತಲುಪಬೇಕಾದ ಪಟ್ಟಿ ಅ. ೧೯ರಂದು ಸಂಜೆ ೪.೩೦ ಆದರೂ
ನಮ್ಮ ಕಾಂಗ್ರೆಸ್ ಪಕ್ಷದ ಚುನಾವಣಾ ಎಜೆಂಟರಿಗೆ ಗದಗ ಜಿಲ್ಲೆಯ ಮತದಾರರ ಪಟ್ಟಿ ದೊರೆತಿಲ್ಲ.
ಇದು ಎನನ್ನು ಸೂಚಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಚುನಾವಣಾ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ತಕ್ಷಣವೇ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಪಿ.ಎಚ್. ನೀರಲಕೇರಿ ಆಗ್ರಹಿಸಿದರು.