ಗದಗ prajakiran.com : ಪಶ್ಚಿಮ ಪದವೀಧರ ಕ್ಷೇತ್ರದ ಮತದಾರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಆ ಸಮಸ್ಯೆಗಳ ನಿವಾರಣೆಗೆ ಶ್ರಮಿಸುವುದಾಗಿ ವಿಧಾನಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಭರವಸೆ ನೀಡಿದರು.
ಅವರು ಸೋಮವಾರ ಜಿಲ್ಲೆಯ ನರೇಗಲ್ಲ ಹಾಗೂ ಗಜೇಂದ್ರಗಡ
ಪಟ್ಟಣದ ವಿವಿಧ ಬಡಾವಣೆಗೆಳಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು.
ಈ ವೇಳೆ ಶ್ರೀ ಅನ್ನದಾನೇಶ್ವರ ಮಹಾವಿದ್ಯಾಲಯದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಸದ್ಯ ಉದ್ಯೋಗದಲ್ಲಿರುವ ಮತ್ತು ಉದ್ಯೋಗ ಇಲ್ಲದ ಅಪಾರ ಪ್ರಮಾಣದ ಪದವೀಧರರು ಸರಕಾರದ ನಿರ್ಲಕ್ಷ್ಯದಿಂದ ತೊಂದರೆ ಅನುಭವಿಸುತ್ತಿದ್ದಾರೆ.
ತಮಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಆಯ್ಕೆ ಮಾಡಿದರೆ, ಸಮಸ್ಯೆಗಳ ನಿವಾರಣೆಗೆ ನಿರಂತರ ಶ್ರಮಿಸುವೆ.
ಪ್ರಮುಖವಾಗಿ ನಿರುದ್ಯೋಗಿ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವಂತೆ ಸರಕಾರದ ಮೇಲೆ ಒತ್ತಡ ತರುವ ಮೂಲಕ ಪದವೀಧರರ ಸೇವೆ ಮಾಡುವುದಾಗಿ ಬಸವರಾಜ ಗುರಿಕಾರ ಅಭಯ ನೀಡಿದರು.
ಈ ವೇಳೆ ನ್ಯಾಯವಾದಿ ಎ.ಕೆ.ಮುಧೊಳ, ಶಿವಾನಂದ ಮೂಲಿಮನಿ, ರಾಜು ರಾಠೋಡ ಸೇರಿದಂತೆ ಅನೇಕರು ಗುರಿಕಾರ ಅವರ ಜೊತೆಯಲ್ಲಿದ್ದರು.