ಗೃಹಸಚಿವರ ಭೇಟಿಗೆ ಮುಂದಾದ ಬ್ರೋಕರ್ ಕಿರಣ್
ಹುಬ್ಬಳ್ಳಿ prajakiran.com : ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜ.9 ರಂದು ನಡೆದ ಕಾರ್ ಸೀಜ್ ಪ್ರಕರಣ ಹೊಸ ತಿರುವು ಪಡೆದಿದೆ.
ಕಾರ್ ನಲ್ಲಿ ಇದ್ದ ನಾಲ್ಕು ಕೆ.ಜಿ. ಬಂಗಾರ ನಾಪತ್ತೆ ಸಿಎಂ. ಗೃಹ ಸಚಿವರ ಅಂಗಳ ತಲುಪಿದೆ.
ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ಪರಿಶೀಲನೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಿದ ಬೆನ್ನಲ್ಲೇ ಐಜಿಪಿ ರಾಘವೇಂದ್ರ ಸುಹಾಸ ವರ್ಗಾವಣೆ ಆದೇಶ ಹೊರಬಿದ್ದಿದೆ.
ಈಗಾಗಲೇ ಡಿಎಸ್ಪಿ ಜಾವೀದ್ ಇಮಾದಾರ್, ಪಿಎಸ್ ಐ ರಮೇಶ ಪಾಟೀಲ, ಇನ್ಸ್ಪೆಕ್ಟರ್ ವರ್ಗಾವಣೆ ಆಗಿತ್ತು.
ಹೀಗಾಗಿ ಈ ಪ್ರಕರಣದ ಕಿಂಗ್ ಪಿನ್ ಎನ್ನಲಾದ ಪೊಲೀಸ್
ಮಾಹಿತಿದಾರ ಬ್ರೋಕರ್ ಕಿರಣ್ ಬುಡಕ್ಕೆ ಬಂದಿದೆ.
ಇತ ನೇರವಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಸಂಪರ್ಕವನ್ನು ಸಾಧಿಸಿ ಡೀಲ್ ಕುದುರಿಸುತ್ತಿದ್ದ.
ಈ ಹಿಂದೆ ಕೂಡ ಇತನ ಹೆಸರು ಹಲವು ಪ್ರಕರಣದಲ್ಲಿ ಕೇಳಿ ಬಂದಿತ್ತು.
ಈತ ಯಮಕನಮರಡಿ ಪೊಲೀಸ್ ಠಾಣೆಗೆ ರಾತ್ರೋ ರಾತ್ರಿ ತೆರಳಿ ಹಿರಿಯ ಪೊಲೀಸ್ ಅಧಿಕಾರಿ ಮೂಲಕ ಕಾರ್ ನಲ್ಲಿದ್ದ ನಾಲ್ಕು ಕೆಜಿ ಬಂಗಾರ ಯಾಮಾರಿಸಿ ಹುಬ್ಬಳ್ಳಿಯಲ್ಲಿ ಮಾರಾಟ ಮಾಡಿದ್ದ ಎಂದು ಹೇಳಲಾಗುತ್ತದೆ.
ಹೀಗಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ಗೆ ತೆರಳಿರುವ ಬ್ರೋಕರ್ ಕಿರಣ್ ಗೆ ಮುಖಾಮುಖಿ ಆಗ್ತಾರಾ ಇಲ್ಲವೇ ಎಂಬುದನ್ನು ಕಾದುನೋಡಬೇಕಿದೆ.