ಧಾರವಾಡ prajakiran.com : ಕರೋನಾ ಮಹಾಮಾರಿ ಎರಡನೇ ಅಲೆಯು ತೀವ್ರಗತಿಯಲ್ಲಿ ಹರಡುತ್ತಿದ್ದರಿಂದ ಧಾರವಾಡ ಜಿಲ್ಲಾಧಿಕಾರಿಗಳು ಮೇ 22ರಿಂದ ಬೆಳಗ್ಗೆ 6 ಗಂಟೆ ಯಿಂದ 24ರ ಬೆಳಗ್ಗೆ 6 ಗಂಟೆವರೆಗೆ ಸಂಪೂರ್ಣ ಲಾಕ್ ಡೌನ್ ಮಾಡಿ ಆದೇಶಿಸಿದ್ದಾರೆ.
ಈ ಸಂದರ್ಭದಲ್ಲಿ ಸಾರ್ವಜನಿಕರು ತುರ್ತು ವೈದ್ಯಕೀಯ ಸೌಲಭ್ಯವನ್ನು ಹೊರತುಪಡಿಸಿ ಯಾವುದೇ ಅಂಗಡಿ ಮುಗ್ಗಟ್ಟುಗಳನ್ನು ತೆರೆಯುವಂತಿಲ್ಲ.
ಹಣ್ಣು, ತರಕಾರಿ, ಹಾಲು ಮಾರಾಟ ಕೇಂದ್ರಗಳನ್ನು ಬೆಳಗ್ಗೆ 6 ಗಂಟೆ ಯಿಂದ ಬೆಳಗ್ಗೆ 8 ಗಂಟೆ ವರೆಗೂ ತೆರೆಯಲು ಅವಕಾಶ ವಿರುತ್ತದೆ.
ಕಿರಾಣಿ ಅಂಗಡಿ ಹಾಗೂ ಮೋರ್ ಅಂಗಡಿ ಗಳಲ್ಲಿ ಹಣ್ಣು ಮತ್ತು ತರಕಾರಿ ಮಾರಾಟಕ್ಕೆ ಅವಕಾಶ ಇರುವುದಿಲ್ಲ.
ಬೆಳಗಿನ ಅವಧಿಯಲ್ಲಿ ಹಾಗೂ ಸಾಯಂಕಾಲದ ಅವಧಿಯಲ್ಲಿ ಸಾರ್ವಜನಿಕರು ವಾಯುವಿಹಾರಕ್ಕೆ ಮತ್ತು ಜಾಗಿಂಗ್ ಗೆ ಅವಕಾಶ ಇರುವುದಿಲ್ಲ.
ಗ್ರೌಂಡ್ ಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ಕ್ರಿಕೆಟ್ ಆಟ ಆಡುವುದು ಮತ್ತು ಇತರೆ ಆಟಗಳನ್ನು ಆಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಸಣ್ಣ ಮಕ್ಕಳನ್ನು ಆಟವಾಡಲು ಮನೆಯಿಂದ ಹೊರಗೆ ಕಳಿಸಿದಲ್ಲಿ ಅದಕ್ಕೆ ಅವರ ಪಾಲಕರನ್ನೆ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.