ರಾಜ್ಯ

ಸುಪಾರಿ ಕೊಡುವ ಬದಲು ವಿಷ ಕೊಟ್ಟಿದ್ದರೆ ಕುಡಿತ್ತಿದ್ದೆ ಎಂದ ಬಸವರಾಜ ಮುತ್ತಗಿ….!

ಚಂದು ಮಾಮ ಶಕುನಿ ಇದ್ದಂತೆ..?

ಧಾರವಾಡ prajakiran.com : ಧಾರವಾಡ ಜಿಲ್ಲೆಯ ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.

ಪ್ರಕರಣದ ಸಿಬಿಐ ತನಿಖೆ ಆರಂಭವಾಗುತ್ತಿದ್ದಂತೆ ಬಸವರಾಜ ಮುತ್ತಗಿಯನ್ನು ಮುಗಿಸಲು ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.

ಇದರ ಮಾಸ್ಟರ್ ಮೈಂಡ್ ಚಂದ್ರಶೇಖರ ಇಂಡಿ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಸವರಾಜ ಮುತ್ತಗಿ, ನನಗೆ ಸುಪಾರಿ ಕೊಟ್ಟಿದ್ದು ನಿಜನೇ ಆದ್ರೆ… ಅದರ ಬದಲು ವಿಷ ಕೊಟ್ಟಿದ್ರೇ ರಾಜರೋಷವಾಗಿ ಕುಡಿತ್ತಿದ್ದೆ ಎಂದು ಹೇಳಿದ್ದಾರೆ.

ನಾನೊಬ್ಬ ಭಾವನ್ಮಾಕ ವ್ಯಕ್ತಿ, ನನ್ನ ಭಾವನೆ ಜೊತೆಗೆ ಕೆಲವರು ಆಟ ಆಡ್ತಿದ್ದಾರೆ. ಅದನ್ನು ಅರಗಿಸಿಕೊಳ್ಳುವ ಶಕ್ತಿ ನನ್ನಲ್ಲಿ ಇಲ್ಲ.

ಕೆಲವು ಜನದ ತರಾ ನಂಗೇ ಸುಳ್ಳು, ಚಾಡ ಹೇಳೋಕ್ಕೆ ಬರಲ್ಲ, ನಾವು ಮೊದಲು ಎಲ್ಲರೂ ಖುಷಿ ಖುಷಿಯಾಗಿ ಇದ್ದವರು.

ಮಹಾಭಾರತದಲ್ಲಿ ಶಕುನಿ ಇದ್ದ ಹಾಗೆ ಚಂದ್ರಶೇಖರ ಇಂಡಿ ಅಲಿಯಾಸ್ ಚಂದು ಮಾಮ ಶಕುನಿ ಇದ್ದಂತೆ.

ಅವರು ನಮ್ಮ ಎಲ್ಲರ ಜೀವನ ಹಾಳು ಮಾಡಿಬಿಟ್ಟರು. ಇನ್ನು ಕೆಲವೊಂದು ವಿಷಯ ತನಿಖೆಯಲ್ಲಿ ಇವೆ. ಅವುಗಳನ್ನು ತನಿಖೆ ಮುಗಿಯುವರಿಗೆ ಹೇಳುವ ಹಾಗಿಲ್ಲ.

ಎಷ್ಟೋ ಸಾರಿ ಮಾಜಿ ಸಚಿವರ ಜೊತೆಗೆ ಊಟ ಮಾಡಿದ್ದವೆ. ಆವಗ್ಲೇ ಎರಡ ಸ್ಪೊನ್ ವಿಷ ಹಾಕಿದ್ರೆ ಖುಷಿಯಿಂದ ನಗುತಾ ಕುಡಿದು ಬಿಡುತ್ತಿದ್ದೆ ಎಂದು ಬಸವರಾಜ ಮುತ್ತಗಿ ಅಸಮಾಧಾನ ವ್ಯಕ್ತಪಡಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *