ಧಾರವಾಡ prajakiran.com : ಲಾಕಡೌನ್ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ ಮಾಡಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಧಾರವಾಡದ ರಾಜನಗರ ಶಿವಳ್ಳಿ ಪ್ಲಾಟ್ ಮುಕ್ತಾಯ ಹಂತದಲ್ಲಿ ಇರುವ ಹಜರತ ನಿಜಾಮೋದ್ದೀನ್ ಮದರಸಾದಲ್ಲಿ ಲಾಕಡೌನ್ ನಿಯಮ ಉಲ್ಲಂಘಿಸಿ ಸಾಮೂಹಿಕವಾಗಿ ನಮಾಜ್ ಮಾಡಿರುವ ಘಟನೆ ನಡೆದಿದೆ.
ಕರೋನಾ ಹಿನ್ನಲೆಯಲ್ಲಿ ದೇಶದ್ಯಾಂತ ಮಂದಿರ, ಮಸೀದಿ ಹಾಗೂ ಚರ್ಚ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನಿರಾಕರಿಸಿ, ನಿರ್ಬಂಧ ಹೇರಲಾಗಿದೆ.
ಈ ಸಂಬಂಧ ಕಟ್ಟು ನಿಟ್ಟಿನ ಸೂಚನೆ ಇದ್ದರೂ ಸಹ ಜಿಲ್ಲಾಡಳಿತ ಹಾಗೂ ವಕ್ಛ ಬೋರ್ಡ್ ಸುತ್ತೋಲೆ ಉಲ್ಲಂಘನೆ ಮಾಡಲಾಗಿದೆ.
ಪೊಲೀಸ್ ಆಯುಕ್ತ ಆರ್ ದಿಲೀಪ್, ಧಾರವಾಡ ಎಸಿಪಿ ಅನುಷಾ ಅವರ ಮಾರ್ಗದರ್ಶನದ ಮೇರೆಗೆ ಧಾರವಾಡ ಉಪನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಪ್ರಮೋದ ಯಲಿಗಾರ್ ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ಅವರನ್ನು ಅಲ್ಲಿಂದ ಚದುರಿಸಿದ್ದಾರೆ.
ಸರಕಾರದ ಆದೇಶ ಉಲ್ಲಂಘಿಸಿ 22 ಜನರು ಪರಸ್ಪರ ಅಂತರ ಕಾಪಾಡಿಕೊಳ್ಳದೆ ಪ್ರಾರ್ಥನೆ ಸಲ್ಲಿಸುತ್ತಿದ್ದರು.
ದುರುದ್ದೇಶದಿಂದ ಗುಂಪಾಗಿ ಸೇರಿ ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ೨೨ ಜನರ ವಿರುದ್ದ ಕಲಂ 188, 270 ಸಹ ಕಲಂ 149ರಅಡಿ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ನಮ್ಮ ಫೇಸ್ ಬುಕ್ ಫೇಜ್ ಲೈಕ್, ಶೇರ್ ಹಾಗೂ ಫಾಲೋ ಮಾಡಲು ಈ ಲಿಂಕ್ ಬಳಸಿ follow/like: facebook.com/prajakirannews