ಧಾರವಾಡದ ಆಲೂರು ವೆಂಕಟರಾಯರ ವೃತ್ತದಲ್ಲಿ
ಘಟನೆ…!
12 ನೇ ದಿನ ಪೂರೈಸಿದ ನೀರು ಸರಬರಾಜು
358 ನೌಕರರ ಸರದಿ ಸತ್ಯಾಗ್ರಹ
ಧಾರವಾಡ ಪ್ರಜಾಕಿರಣ. ಕಾಮ್ : ಕಳೆದ 12 ದಿನಗಳಿಂದ ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ನೇತೃತ್ವದಲ್ಲಿ
358 ನೌಕರರು ಸರದಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಈವರೆಗೂ ಯಾರೊಬ್ಬರೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ಸವದತ್ತಿಯ ಜಾಕ್ ವೆಲ್ ನಲ್ಲಿ ಕಳೆದ 18-20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಉಗರಗೋಳದ ನಿವಾಸಿ ಮಲ್ಲಿಕಾರ್ಜುನ ತಳವಾರ
ಶುಕ್ರವಾರ 12 ನೇ ದಿನ
ಧಾರವಾಡದ ಆಲೂರು ವೆಂಕಟರಾಯರ ವೃತ್ತದಲ್ಲಿ
ಟಾವರ್ ಏರಿ, ಮರುನೇಮಕಕ್ಕೆ ಒತ್ತಾಯಿಸಿದ ವಿಚಿತ್ರ ಘಟನೆ ನಡೆಯಿತು.
ಟಾವರ್ ನಿಂದ ಕೆಳಗೆ ಇಳಿಸಲು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಒಂದು ಗಂಟೆಗಳ ಕಾಲ ಹರಸಾಹಸ ನಡೆಸಿದರು.
ಟಾವರ್ ಏರಿದವ ನೀರು ಸರಬರಾಜು ನೌಕರ ಎಂದು ಅರಿಯುತ್ತಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ ಆತನನ್ನು, ಮೊಬೈಲ್ ಮೂಲಕ ಸಂರ್ಪಕಿಸಿದರೂ ಯಾವುದೇ ಸ್ಪಂದನೆ ಸಿಗಲಿಲ್ಲ. ಕೊನೆಗೆ ಯಾವುದೇ ದಾರಿ ಕಾಣದೆ ಸ್ವತಃ ಅವರೇ
ಟಾವರ್ ಏರಲು ಮುಂದಾದರು.
ಆ ವೇಳೆಗೆ ಮೇಲೆ ಏರಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಮನವೊಲಿಸಿ ಮೊಬೈಲ್ ಮೂಲಕ ನಾಗರಾಜ ಕಿರಣಗಿ ಅವರ ಜೊತೆಗೆ ಮಾತನಾಡಿಸಿದರು.
ಆಗ ಸಮಾಧಾನದಿಂದ ಕೆಳಗೆ ಇಳಿಯಲು ಮಲ್ಲಿಕಾರ್ಜುನ ತಳವಾರ ಸಮ್ಮತಿ ನೀಡಿದ.
ಟಾವರ್ ಏರಿ ಕುಳಿತವ ನೀರು ಸರಬರಾಜು ನೌಕರ ಎಂದು ತಿಳಿಯುತ್ತಲೇ ಘಟನಾ ಸ್ಥಳಕ್ಕೆ ಆಗಮಿಸಿದ ನೂರಾರು ನೌಕರರು ದಿಡೀರ್
ಪ್ರತಿಭಟನೆ ನಡೆಸಿದರು.
ಇದರಿಂದಾಗಿ ಅರ್ಧ ಗಂಟೆಯ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.
ಆನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಅವರನ್ನು ಸುರಕ್ಷಿತವಾಗಿ ಕೆಳಗೆ ಕರೆ ತಂದರು.ಒಂದು ಗಂಟೆಗಳ ಬಳಿಕ ಪರಿಸ್ಥಿತಿ ತಿಳಿಯಾಯಿತು.
ಈ ಸಂದರ್ಭದಲ್ಲಿ
ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಮಾತನಾಡಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಎಲ್ ಆಂಡ್ ಟಿ ಕಂಪನಿಯು
7 ತಿಂಗಳು ದುಡಿಸಿಕೊಂಡು ಕೊನೆಗೆ ಸಂಬಳವೂ ನೀಡದೆ 358 ನೌಕರರ ಮರು ನೇಮಕವೂ ಮಾಡಿಕೊಳ್ಳದೆ ಬಡ ಮಕ್ಕಳನ್ನು ಬೀದಿಗೆ ತಂದು ನಿಲ್ಲಿಸಿದೆ.
ಹೀಗಾಗಿ ನಮ್ಮ ನೌಕರ ಮಲ್ಲಿಕಾರ್ಜುನ ತಳವಾರ ಟಾವರ್ ಏರಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾನೆ. ಈಗಲಾದರೂ ಸರಕಾರ ಕಣ್ಣು ತೆರೆದು ನೋಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಇಲ್ಲದಿದ್ದರೆ 358 ನೌಕರರ ಪೈಕಿ
ಯಾರಿಗಾದರೂ ಏನಾದರೂ ಹೆಚ್ಚು ಕಡಿಮೆ ಆದರೆ ಇದರ ಹೊಣೆ ಯಾರು ಹೊರುತ್ತಾರೆ ಎಂದು ಸರಕಾರಕ್ಕೆ ಪ್ರಶ್ನೆ ಮಾಡಿದರು.
12 ದಿನದ ಹೋರಾಟ ಬೆಂಬಲಿಸಿ ಸವದತ್ತಿಯ ಸಾಮಾಜಿಕ ಕಾರ್ಯಕರ್ತ ಸೌರಭ್ ಚೋಪ್ರಾ, ಅಮೀರ್ ಗೌರಿ ನಾಯಕ್ , ಪಾಲಿಕೆ ಸದಸ್ಯ ಶಂಭು ಸಾಲಮನಿ, ಯುವ ಮುಖಂಡ ಸಂತೋಷ ನೀರಲಕಟ್ಟಿ ಸೇರಿದಂತೆ ಅನೇಕ ನೀರು ಸರಬರಾಜು ನೌಕರರ ಹೋರಾಟಕ್ಕೆ ಬೆಂಬಲಿಸಿ ಪಾಲ್ಗೊಂಡಿದ್ದರು.