ಬೆಳಗಾವಿ prajakiran.com : ಬಟ್ಟೆ ತೊಳೆಯಲು ಹೋದ ನಾಲ್ವರು ಕೊಚ್ಚಿ ಹೋದ ಬೆಳಗಾವಿ ಜಿಲ್ಲೆಯ ಅಥಣಿ ಸಮೀಪದ ಕೃಷ್ಣಾ ನದಿಯಲ್ಲಿ ನಡೆದಿದೆ.
ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋದ ನಾಲ್ವರನ್ನು ಸಹೋದರರು ಅಥಣಿ ತಾಲೂಕಿನ ಹಳ್ಯಾಳದವರು ಎಂದು ಗುರುತಿಸಲಾಗಿದೆ.
ಅವರಿಗಾಗಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಈಜುಪಟುಗಳು
ಶೋಧ ಕಾರ್ಯ ನಡೆಸುತ್ತಿದ್ದಾರೆ.
ಗೋಪಾಲ ಬನಸುಡೆ (36), ಸದಾಶಿವ ಬನಸುಡೆ (24), ಧರೆಪ್ಪ ಬನಸುಡೆ (22), ಶಂಕರ ಬನಸುಡೆ (20) ನೀರು ಪಾಲಾದವರು ಎಂದು ತಿಳಿದುಬಂದಿದೆ.
ಇವರೆಲ್ಲರೂ ಒಟ್ಟಿಗೆ ಬಟ್ಟೆ ತೊಳೆಯಲು ಹೋದಾಗ ಒಬ್ಬ ನೀರು ಪಾಲಾಗಿದ್ದಾನೆ.
ಆಗ ಅವನನ್ನು ರಕ್ಷಿಸಲು ಹೋದ ಇತರರೂ ನೀರು ಪಾಲಾಗಿದ್ದಾರೆ ಎಂದು ಅಥಣಿ ಪೊಲೀಸರು ತಿಳಿಸಿದ್ದಾರೆ.