ಧಾರವಾಡ prajakiran.com : ಧಾರವಾಡದಲ್ಲಿ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಜನುಮದಿನದ ಹಿನ್ನೆಲೆಯಲ್ಲಿ ಆಹಾರ ಕಿಟ್ ವಿತರಣೆ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಕೋವಿಡ್ ನಿಯಮಾವಳಿಗಳನ್ನು ಸ್ಪಷ್ಟವಾಗಿ ಗಾಳಿಗೆ ತೂರಿ, ಸಾಮಾಜಿಕ ಅಂತರ ಮರೆತು ನೂರಾರು ಜನರು ಒಂದೆಡೆ ಸೇರಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೂರಾರು ಬಡ ಜನರಿಗೆ ಆಹಾರ ಕಿಟ್ ವಿತರಣೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಧಾರವಾಡ ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘನೆ ಮಾಡಿ ಫುಡ್ ಕಿಟ್ ಪಡೆಯಲು ಜನರ ನೂಕುನುಗ್ಗಲು ಕಂಡು ಬಂದಿದೆ.
ಧಾರವಾಡದ ಮುರುಘಾ ಮಠದ ರಸ್ತೆಯಲ್ಲಿ ಸೋಮವಾರ ಈ ಕಾರ್ಯಕ್ರಮವನ್ನು ಅವರ ಅಭಿಮಾನಿಗಳು ಆಯೊಜಿಸಿದ್ದರು.
ಈ ವೇಳೆ ನೂರಾರು ಜನರು ಆಹಾರ ಕಿಟ್ ಗಾಗಿ ಮುಗಿ ಬಿದ್ದಿದ್ದರು. ಅವರನ್ನು ನಿಯಂತ್ರಿಸಲು ಆಯೋಜಕರುಬಕೂಡ ಹರಸಾಹಸ ನಡೆಸಬೇಕಾಯಿತು.
ಹೀಗಾಗಿ ಸಾಮಾನ್ಯ ಜನರಿಗೆ ಮನಸೋ ಇಚ್ಛೆ ದಂಡ ವಿಧಿಸುವ ಹಾಗೂ ಪ್ರಕರಣ ದಾಖಲಿಸುವ ಹುಬ್ಬಳ್ಳಿ-ಧಾರವಾಡ ಪೋಲೀಸರು ಇವರ ವಿರುದ್ದವೂ ಕ್ರಮ ಕೈಗೊಳ್ಳುತ್ತಾರಾ ಅಥವಾ ಕೈ ತೊಳೆದುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ ಎಂದು ಹುಬ್ಬಳ್ಳಿ ಧಾರವಾಡ ಜನತೆ ಗುಸು ಗುಸು ಮಾತಾಡಿಕೊಳ್ಳುವಂತೆ ಆಗಿದೆ.